ಅಂಬೇಡ್ಕರ್ ಸಾಧನೆ ನಮ್ಮೆಲ್ಲರಿಗೂ ಅನುಕರಣೀಯ: ಕೆಎಸ್ ವಿ ರಘು

14 Apr 2019 8:37 PM |
1792 Report

ಕೊರಟಗೆರೆ ಏ.14:- ದೇಶ ಕಂಡ ಮಹಾ ಚೇತನ ಸಂಮಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಾಧನೆ ಶ್ಲಾಂಘನೀಯ ಎಂದು ಕನ್ನಿಕಾ ವಿದ್ಯಾಪೀಠ ಕಾರ್ಯದರ್ಶಿ ಕೆ.ಎಸ್.ವಿ ರಘು ತಿಳಿಸಿದರು. ಕೊರಟಗೆರೆ ಪಟ್ಟಣದ ಕನ್ನಿಕಾ ವಿದ್ಯಾಪೀಠ ಶಾಲೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 143 ದೇಶದಲ್ಲಿ ಅಂಬೇಡ್ಕರ್ ಜನ್ಮ ದಿನವನ್ನು ಆಚರಿಸುತ್ತಿದ್ದಾರೆ ಇದನ್ನು ಗಮನಸಿದರೆ ಅಂಬೇಡ್ಕರ್ ಸಾಧನೆ ಎಷ್ಟು ಮಹತ್ತರವಾದದ್ದು ಎಂದು ತಿಳಿಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಕ ರಾಧಾ ಕೃಷ್ಣ,, ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ , ಶಿಕ್ಷಕಿಯರಾದ ರಾಧಾ, ಬೀಬಿ ಅಯಿಷಾ, ಭಾರತೀ, ಶಾರದಾ, ದಿವ್ಯಶ್ರೀ, ಮಂಜುಳಾ, ಅಶ್ವಿನಿ, ಮಮತ, ದೀಪಾ, ಗೀತಾ, ಸುನಿತಾ, ಮನೋಹರ್ ಬಾಬು, ನಾಗರಾಜು ಸೇರಿದಂತೆ ಇತರರು ಇದ್ದರು

Edited By

Raghavendra D.M

Reported By

Raghavendra D.M

Comments