ಈ ಜೆಡಿಎಸ್ ಮುಖಂಡರಿಗೆ ಸಿಕ್ಕಿದೆ ಸಚಿವ ಸ್ಥಾನ..!?

05 Nov 2018 12:10 PM |
8671 Report

ವಿಧಾನ ಪರಿಷತ್‌ ಸಭಾಪತಿ ತಮಗೆ ಸಚಿವ ಸ್ಥಾನ ನೀಡಿದರೂ ಖುಷಿ, ನೀಡದಿದ್ದರೂ ಸಂತೋ​ಷ ಎಂದಿದ್ದರು.. ಈ ವಿಚಾರದಲ್ಲಿ ಮಾಜಿ ಪ್ರದಾನಿ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ಬಸವರಾಜ ಹೊರಟ್ಟಿ ಯಾವಾಗಲೂ ಬದ್ದವಾಗಿರುತ್ತೇನೆ ಎಂದಿದ್ದರು.

ಭಾನುವಾರ ಧಾರವಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಮಾಧ್ಯಗಳ ಮೂಲಕ ತಿಳಿದುಬಂದಿದೆ.. ವಿಷಯವಾಗಿ ಪಕ್ಷದಿಂದ ಯಾವ ಮಾಹಿತಿ ತಮಗಿಲ್ಲ. ನಾನಂತೂ ಸಚಿವ ಸ್ಥಾನ ಬೇಕೆಂದು ಎಂದಿಗೂ ಯಾವತ್ತೂ ಹಠ ಹಿಡಿದಿಲ್ಲ. ಸಭಾಪತಿ ಸ್ಥಾನಕ್ಕೆ ಸಾಕಷ್ಟುಗೌರವ ಇದ್ದು, ಪಕ್ಷದಿಂದ ದೊರೆತಿರುವ ಗೌರವವು ಸಮಾಧಾನ ತಂದಿದೆ ಎಂದು ಹೇಳಿದರು.

Edited By

hdk fans

Reported By

hdk fans

Comments