ಶ್ರೀ ವಿನಾಯಕ, ಶ್ರೀ ದತ್ತಾತ್ರೇಯ ಸಮೇತ ಶ್ರೀ ಶಿರಡಿ ಸಾಯಿಬಾಬ ಮಂದಿರ ಉದ್ಘಾಟನಾ ಮಹೋತ್ಸವ

02 Nov 2018 8:33 PM |
977 Report

ಇದೇ ವರ್ಷ 2018 ರ ವಿಜಯದಶಮಿಗೆ ಸಾಯಿಬಾಬಾರವರು ಮಹಾ ಸಮಾಧಿಯಾಗಿ ನೂರು ವಸಂತಗಳು ಪೂರೈಸಿದ ಪ್ರಯುಕ್ತ ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ, ಘಾಟಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದರಸ್ತೆಯಲ್ಲಿರುವ ಹಾಡೋನಹಳ್ಳಿ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಶಿರಡಿ ಸಾಯಿಬಾಬ ದೇವಸ್ಥಾನದ ಉದ್ಘಾಟನೆಯನ್ನು ಕಾರ್ತೀಕ ಶುದ್ಧ ದಶಮಿ ಭಾನುವಾರ ದಿನಾಂಕ 18-11-2018 ರಂದು ದಿವ್ಯ ಮಂಗಳ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ನೆರವೇರಿಸಲಾಗುವುದು, ಎಲ್ಲ ಭಕ್ತಾದಿಗಳು ಆಗಮಿಸಿ ಭಗವತ್ ಕೈಂಕರ್ಯದಲ್ಲಿ ಭಾಗವಹಿಸಿ ಶ್ರೀ ಗುರು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ ಮಂಡಲಿಯವರು ಕೋರುತ್ತಾರೆ.

ಕಾರ್ಯಕ್ರಮದ ವಿವರ:-

ಆಗಮಿಕರು- ಶ್ರೀ ಗುರುಕಿರಣ್ ದೇಶಪಾಂಡೆ ಮತ್ತು ತಂಡದವರಿಂದ ದಿನಾಂಕ 17-11-2018 ಶನಿವಾರ ಸಂಜೆ 5 ಘಂಟೆಗೆ ಶ್ರೀ ವಿನಾಯಕ ಪೂಜೆ, ಯಾಗಶಾಲ ಪ್ರವೇಶ, ಕಲಶಾರಾಧನೆ, ಬಿಂಬ ಶುದ್ಧಿ, ಶಯಾಧಿವಾಸ, ಪುಷ್ಪಾಧಿವಾಸ, ನವನೀತ ಲೇಪನ, ಕಲಶ ಸ್ಥಾಪನೆ, ಶ್ರೀ ರಕ್ಷೋಘ್ನ ಹೋಮ, ಶ್ರೀ ಲಕ್ಷ್ಮೀ ಹೋಮ, ಬಲಿಹರಣ, ಮಂತ್ರಪುಷ್ಪ, ರಾತ್ರಿ ಎಂಟು ಘಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.

ದಿನಾಂಕ 18-11-2018 ರ ಭಾನುವಾರ ಬೆಳಿಗ್ಗೆ 6 ಘಂಟೆಗೆ ಗಣಪತಿ ಪೂಜೆ, ಗೋಪೂಜೆ, ಯಮುನಾ ಪೂಜೆ, ಗಂಗಾ ಪೂಜೆ, ಗುರುವಂದನೆ, ಸಭಾವಂಅನೆ, ದೇವನಾಂದಿ, ಮೃತ್ಸಂಗ್ರಹಣ, ಮಹಾಗಣಪತಿ ಹೋಮ, ದತ್ತಾತ್ರೇಯ ಹೋಮ, ತತ್ವನ್ಯಾಸಹಾನಿ ಸಹಿತ ಮಹಾಸುದರ್ಶನ ಹೋಮ, ವಿಶೇಷ ಸಾಯಿರಾಮತಾರಕ ಹೋಮ, ಪೂರ್ಣಾಹುತಿ ನಂತರ ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನಾ, ದೇನು ದರ್ಶನ, ಕದಲೀ ಕಂಭ ಛೇದನ, ಕೂಷ್ಮಾಂಡ ಬಲಿ, ಮಹಾ ಕುಂಭಾಭಿಷೇಕದೊಂದಿಗೆ ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.

ಮಧ್ಯಾಹ್ನ 1-00 ಘಂಟೆಗೆ ಬೆಂಗಳೂರಿನ ವಿಕಾಸ ವಿಕಲಚೇತನ ಅಂದರ ವಾದ್ಯಗೋಷ್ಠಿ, ಮಧ್ಯಾಹ್ನ 3-00 ಘಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಆರ್ಯ ವೈಶ್ಯ ಮಹಿಳಾ ಮಂಡಳಿ, ಶ್ರೀ ಗಾಯತ್ರಿದೇವಿ ಮಹಿಳಾ ಮಂಡಳಿ, ಶ್ರೀ ಚೌಡೇಶ್ವರಿ ಮಹಿಳಾ ಸಂಘ ಮತ್ತು ಶ್ರೀ ಗಾಯತ್ರಿ ಬ್ರಾಹ್ಮಣ ಮಂಡಳಿಯವರಿಂದ. ಸಂಜೆ 4-30 ಘಂಟೆಗೆ ಗಾನ ಸುಧಾ ಲಲಿತಕಲಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 5-30 ಘಂಟೆಗೆ ಪ್ರವಚನ ಮತ್ತು ಹಾಡುಗಾರಿಕೆ ಶ್ರೀ ಆನಂದಭಾರತಿ ಸ್ವಾಮೀಜಿಯವರಿಂದ, 6-30 ಘಂಟೆಗೆ ಸಂಗೀತ ಕಾರ್ಯಕ್ರಮ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :- ಶೋಬನ್ ಬಾಬು 9242892995    

Edited By

Ramesh

Reported By

Ramesh

Comments