ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದ ಬಿಜೆಪಿ ಒಕ್ಕಲಿಗ ಮುಖಂಡರು..! ಒಕ್ಕಲಿಗ ರ ಈ ಗುಡುಗಿಗೆ ಸಿಂಹ ಗಪ್ ಚುಪ್..!!

28 Sep 2018 4:17 PM |
5104 Report

ಮುಂದಿನ 2019ರ  ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿರುವುದು ಕಂಡು ಬರುತ್ತಿದೆ. ಇದರ ನಡುವೆ ಮೈಸೂರಿನ ಬಿಜೆಪಿಯ ತಳಮಟ್ಟದ ಒಂದಷ್ಟು ಒಕ್ಕಲಿಗ ನಾಯಕರು ಹಾಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧವೇ ತಿರುಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನಾನೇ ಅಭ್ಯರ್ಥಿ. ನನಗೆ ಟಿಕೆಟ್ ನೀಡುತ್ತಾರೆ ಎಂದು ಹೇಳುತ್ತಾ ಬಂದಿರುವ ಪ್ರತಾಪ್ ಸಿಂಹ ಅವರಿಗೆ ಮೈಸೂರಿನಲ್ಲಿ ಕೆಲವು ಒಕ್ಕಲಿಗ ನಾಯಕರು ಸೇರಿ ರಹಸ್ಯ ಸಭೆ ನಡೆಸಿರುವುದು ಮುಂದಿನ ದಿನಗಳಲ್ಲಿ ಮಗ್ಗುಲಿನ ಮುಳ್ಳಾಗಿ ಚುಚ್ಚುವ ಎಲ್ಲ ಲಕ್ಷಣಗಳು ಕಾಣತೊಡಗಿದೆ. ಈಗಾಗಲೇ ಪ್ರತಾಪ್ ಸಿಂಹ ಅವರ ಕೆಲವು ನಿರ್ಧಾರಗಳು, ಹೇಳಿಕೆಗಳು ಬಿಜೆಪಿಯ ಕೆಲವು ನಾಯಕರಿಗೆ ಇರಿಸುಮುರಿಸನ್ನುಂಟು ಮಾಡಿದ್ದಂತು ನಿಜ. ಹೀಗಿರುವಾಗ ಈ ರಹಸ್ಯ ಸಭೆ ಹಲವು ಕುತೂಹಲಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ವೇಳೆ ಅಲ್ಲಿನ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಏನೂ ಮಾತನಾಡದ ಪ್ರತಾಪ್ ಸಿಂಹ ಅವರು ಬಳಿಕ ಫೇಸ್ ಬುಕ್ ಮೂಲಕ ದೇವಯ್ಯ ಅವರಿಗೆ ಪ್ರತಿಕ್ರಿಯೆ ನೀಡಿದ್ದರು.ಆದರೆ ಪ್ರತಿಕ್ರಿಯೆ ನೀಡುವ ವೇಳೆ ಬಳಸಿದ ಶಬ್ದಗಳು ದೇವಯ್ಯ ಅವರನ್ನು ಕೆರಳಿಸಿದ್ದಲ್ಲದೆ, ಅದಕ್ಕೆ ಅವರು ತೀಕ್ಷ್ಣವಾಗಿಯೇ ಉತ್ತರಿಸಿದ್ದರು.

Edited By

Shruthi G

Reported By

hdk fans

Comments