ಸಿಎಂ ಆಗುವ ಬಿ.ಎಸ್. ವೈ ಕನಸಿಗೆ ಖಡಕ್ ಟಕ್ಕರ್ ಕೊಟ್ಟ ಜಮೀರ್​ ಅಹಮ್ಮದ್..!!​

20 Sep 2018 3:33 PM |
13945 Report

ಎಲ್ಲರೂ ರಾತ್ರಿ ಕನಸು ಕಂಡ್ರೆ ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ಕೆಡವಲು ಹಗಲುಗನಸು ಕಾಣ್ತಿದ್ದಾರೆ ಅಂತ ಜಮೀರ್​ ಅಹಮ್ಮದ್​ ಖಾನ್ ವ್ಯಂಗ್ಯವಾಡಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್​ ಅಹಮ್ಮ ಅವರು, ಬಿ ಎಸ್​ ಯಡಿಯೂರಪ್ಪ ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಕೆಲವೊಂದು ಭಿನ್ನಾಬಿಪ್ರಾಯಗಳು ಇದ್ದವು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು ಎಲ್ಲವನ್ನು ಬಗೆಹರಿಸಿದ್ದಾರೆ ಎಂದು ಜಮೀರ್​ ಅಹ್ಮದ್​ ಸ್ಪಷ್ಟಪಡಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಯಿಂದ ಇನ್ನೂ ನೊಟೀಸ್ ಬಂದೇ ಇಲ್ಲ. ಆದರೆ ಕೆಲವರು ಹಾಗೆ, ಹೀಗೆ ಅಂತಿದ್ದಾರೆ ಎಂದು ಸಚಿವ ಜಮೀರ್​ ಕಿಡಿಕಾರಿದರು.

Edited By

Shruthi G

Reported By

hdk fans

Comments