ಅತಿರಾತ್ರ ಸೋಮಯಾಗ ಬೆಂಗಳೂರು ಸಮಿತಿಗೆ ದೊಡ್ಡಬಳ್ಳಾಪುರದ ಆರು ಮಂದಿಗೆ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ
ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೇವೂರು, ಉಪ್ಪಳ, ಕಾಸರಗೋಡು ಜಿಲ್ಲೆ ಇಲ್ಲಿ ಮುಂದಿನ ವರ್ಷ 2019 ಫೆಬ್ರವರಿ ತಿಂಗಳಲ್ಲಿ ದಿನಾಂಕ 18-02-2019 ರಿಂದ 24-02-2019 ರವರೆಗೆ ನಡೆಯುವ ಅತಿರಾತ್ರ ಸೋಮಯಾಗದ ಕಾರ್ಯಕಾರಿ ಸಮಿತಿ ಬೆಂಗಳೂರು ವಿಭಾಗಕ್ಕೆ ಪದಾಧಿಕಾರಿಗಳನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ರಚಿಸಿದ್ದು, ಜೂಲೈ ತಿಂಗಳ ಬೆಂಗಳೂರಿನ ಸಮಿತಿಯ ಸಭೆಯಲ್ಲಿ ಪ್ರಕಟಿಸಿದರು, ಗೌರವಾಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಹಿರಿಯ ವಾಣಿಜ್ಯೋದ್ಯಮಿ ಶ್ರೀ ಹೆಚ್.ಪಿ.ಶಂಕರ್ ರವರನ್ನು ನೇಮಿಸಿದ್ದಾರೆ, ಅಧ್ಯಕ್ಷರನ್ನಾಗಿ ಡಾ.ಜಿ.ರಮೇಶ್,ಅಧ್ಯಕ್ಷರು. ಕರ್ನಾಟಕ ರಾಜ್ಯ ದೇವಾಂಗ ಸಂಘ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೃಪಾಶಂಕರ್, ಬೆಂ. ಸಮಿತಿಯ ಉಪಾಧ್ಯಕ್ಷರನ್ನಾಗಿ ಡಾ.ನಾರಾಯಣ್, ಸಿ.ಇ.ಓ. ಸಿವಿಕ್ ನ್ಯೂಸ್, ಆರೂಡಿ ರಮೇಶ್, ಕಾರ್ಯದರ್ಶಿ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ನೇಮಿಸಿದ್ದು, ಸಮಿತಿಯ ಸದಸ್ಯರನ್ನಾಗಿ ಶ್ರೀ ಕೆ.ಎಂ.ಕೃಷ್ಣಮೂರ್ತಿ, ಟ್ರಸ್ಟೀ, ಶ್ರೀ ಎಸ್.ಶಿವಾನಂದ್, ಟ್ರಸ್ಟೀ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಮತ್ತು ಶ್ರೀ ಬಿ.ಎನ್.ಉಮಾಶಂಕರ್, ಕಾರ್ಯದರ್ಶಿ,ಯುವ ಬಳಗ, ಇವರನ್ನು ನೇಮಿಸಲಾಗಿದೆ.




Comments