ಮೋದಿ ಶಕ್ತಿ ಕ್ಷೀಣಿಸಿ ದೆಹಲಿಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ರಾಜ್ಯದ ದಳಪತಿ ಎಚ್’ಡಿಕೆ.!

14 Jul 2018 1:44 PM |
29538 Report

ಕುಮಾರಸ್ವಾಮಿ ಜೆ.ಪಿ. ನಗರದ ಮನೆಯನ್ನು ಮಾರಲು ನಿರ್ಧರಿಸಿದರು.ಖರೀದಿ ಮಾಡಲು ಬಂದವರು ಮುಂಗಡ ಹಣವನ್ನೂ ನೀಡಿದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಕುಮಾರಸ್ವಾಮಿಯವರಿಗೆ ಮಹತ್ವದ ಸಂದೇಶವೊಂದು ಬಂದು ತಲುಪಿತು. ಆ ಸಂದೇಶ ಬಂದ ನಂತರ ಕುಮಾರಸ್ವಾಮಿ ಆ ಮನೆ ಮಾರದಿರಲು ನಿರ್ಧಾರ ಮಾಡಿದರು. ಏನು ಅಂತೀರಾ? ಹಾಗಾದ್ರೆ ಮುಂದೆ ಓದಿ..

ಕುಮಾರಸ್ವಾಮಿ ಈಗಿರೋ ಜೆಪಿ ನಗರದ ನಿವಾಸಕ್ಕೆ ಒಂದು ಕರಿನಾಗರ ಬಂದಿತ್ತು, ಆ ಕರಿನಾಗ ಅಂತಿಂಥದ್ದಾಗಿರಲಿಲ್ಲ, ಅದು ಅಕ್ಷರಶಃ ಅದೃಷ್ಟವನ್ನ ಹೊತ್ತು ತಂದಿತ್ತು, ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಅಧಿಕಾರ ಹಿಡಿಯುವಂತ ಲಕ್ ಅನ್ನು ಆ ಕರಿನಾಗರ ಕರುಣಿಸಿತ್ತು.  ಮನೆಯಲ್ಲಿ ಯಾವಾಗ ಸರ್ಪ ಪ್ರತ್ಯಕ್ಷವಾಯ್ತೋ ಕುಮಾರಸ್ವಾಮಿ ಅಂದೇ ನಿರ್ಧಾರ ಮಾಡಿ ಬಿಟ್ಟಿದ್ದರು, ಯಾವುದೇ ಕಾರಣಕ್ಕೂ ಈ ಮನೆಯನ್ನ ಬಿಡಬಾರದು ಅಂತಾ ದೃಢ ನಿರ್ಧಾರ ಮಾಡಿದ್ದಾರೆ. ಕುಮಾರಸ್ವಾಮಿಯವರೇ ಕರಿನಾಗರ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ನೀವು ಕಳೆದುಕೊಂಡ ವೈಭವವನ್ನು ಮರಳಿ ಪಡೆಯುತ್ತೀರಿ. ಮುಖ್ಯಮಂತ್ರಿಗಿರಿ ಮಾತ್ರವಲ್ಲ, ನಿಮ್ಮ ತಂದೆಯಂತೆಯೇ ಈ ದೇಶದ ಪ್ರಧಾನಿಯಾಗುವ ಅವಕಾಶವೂ ಇದೆ. ಹಾಗಂತ ಕರಿ ನಾಗರ ಯಾವ ಮನೆಯಲ್ಲಿ ಕಾಣುತ್ತದೋ? ಆ ಮನೆಯವರಿಗೆಲ್ಲ ಇಂತಹ ಪಟ್ಟ ಒದಗುತ್ತದೆ ಎಂದು ಹೇಳಲಾಗದು. ಆದರೆ ನಿಶ್ಚಿತವಾಗಿ ಅವರು ತಮ್ಮ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಅವಕಾಶಗಳಿರುತ್ತವೆ. ನಿಮಗೆ ರಾಜಕೀಯವೇ ಸರ್ವಸ್ವ. ಹೀಗಾಗಿ ನಿಮ್ಮ ಗ್ರಹಗತಿಗಳಿಗೆ ಕರಿನಾಗರ ಕಂಡಿರುವುದು ಪೂರಕ. ಹಾಗೆಯೇ ನೀವು ಡೆಡ್ಲಿ ಪವರ್ ಹೊಂದುತ್ತೀರಿ.

 

 

Edited By

Shruthi G

Reported By

hdk fans

Comments