ರೈತರ ಸಾಲಮನ್ನಾ ಕುರಿತು ಸುಳಿವು ಕೊಟ್ಟ ಸಚಿವ ಎಚ್​.ಡಿ.ರೇವಣ್ಣ

01 Jul 2018 2:58 PM |
3522 Report

ಇಂದು ಹಾಸನದಲ್ಲಿ 10 ಕೋಟಿ ವೆಚ್ಚದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಈ ಸಲದ‌ ಬಜೆಟ್‌ನಲ್ಲಿ ರೈತರ ಸಾಲ ಮಾಡೋದು ಖಚಿತ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ಹೇಳಿದ್ದಾರೆ.

ಹಾಸನ ವೈದ್ಯಕೀಯ ಆಸ್ಪತ್ರೆಯನ್ನು135 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಳೆದ‌ ಐದು ತಿಂಗಳಿನಿಂದ ರಸ್ತೆ ಕಾಂಕ್ರಿಟೀಕರಣಕ್ಕಾಗಿ ಹಾಸನ-ಮಂಗಳೂರು ಹೆದ್ದಾರಿ ಬಂದ್​ ಆಗಿದ್ದು, 10 ‌ದಿನಗಳೊಳಗೆ‌ ಶಿರಾಡಿ ಘಾಟ್ ಕಾಮಗಾರಿ‌ ಮುಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ರಸ್ತೆಯನ್ನ‌ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಅವರು ಹೇಳಿದರು.

 

Edited By

Shruthi G

Reported By

hdk fans

Comments