ರೈತರ ಸಾಲಾಮನ್ನಾ ಕುರಿತು ಸಿಹಿ ಸುದ್ದಿ ಕೊಟ್ಟ ನಿಖಿಲ್ ಕುಮಾರಸ್ವಾಮಿ..!

29 Jun 2018 11:14 AM |
7022 Report

ನಮ್ಮ ತಂದೆಯವರು ಹಿಂದೆ ಹೇಳಿದಂತೆ ಇನ್ನು ಎಂಟು, ಹತ್ತು ದಿನಗಳ ಒಳಗೆ ರೈತರ ಸಂಪೂರ್ಣ ಸಾಲಾಮನ್ನ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಮ್ಮ ತಂದೆಯವರು ಸಿಎಂ ಆಗಿದ್ದಾರೆ, ಆದರೆ ನಮ್ಮನ್ನು ರಾಜ್ಯದ ಜನತೆ ಸಂರ್ಪೂವಾಗಿ ಕೈ ಹಿಡಿಯದ ಕುರಿತು ನಮ್ಮ ಮನಸ್ಸಿನಲ್ಲಿ ನೋವಿದೆ. ಈಗಗಾಲೇ ಸರ್ಕಾರದ ಕುರಿತು ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಮ್ಮ ತಂದೆಯವರು ರಾಜ್ಯದ ಜನತೆಗೆ ನೀಡಿದ್ದ ಸಾಲಮನ್ನಾ ಭರವಸೆಯನ್ನು ಈಡೇರಿಸುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಕನಸಿನ ಕರ್ನಾಟಕ ನಿರ್ಮಾಣ ಮಾಡಲು ಕಾರ್ಯನಿರ್ವಹಿಸುತ್ತಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ನೀಡುತ್ತಾರೆ ಎಂದರು.

ಹಲವು ಬಾರಿ ಮಾಧ್ಯಮಗಳಿಂದ ನನಗೆ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಎದುರಾಗುತ್ತಿದೆ. ನಾನು ಹುಟ್ಟುತ್ತ ರಾಜಕೀಯ ಕುಟುಂಬದಿಂದ ಬಂದವನು. ಅದ್ದರಿಂದ ರಾಜಕೀಯ ಪ್ರವೇಶ ಪ್ರತ್ಯೇಕವಾಗಿಲ್ಲ, ಈಗಾಗಲೇ ರಾಜಕೀಯದಲ್ಲಿದ್ದೇನೆ. ಸಿನಿಮಾ ಮಧ್ಯೆಯೇ ಹಲವು ಜಿಲ್ಲೆಗಳ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕೆಲ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದು, ಈ ಕುರಿತು ಸಹ ನಾನು ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಪಕ್ಷದ ಸಂಘಟನೆಯೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.

Edited By

Shruthi G

Reported By

hdk fans

Comments