ದಿನೇಶನಿಗೆ ಕೈ ಕೊಟ್ಟು ಭಾಸ್ಕರನ ಕೈ ಹಿಡಿದ ಹೇಮಾವತಿ!

20 Jun 2018 9:38 AM |
2082 Report

ಕೈಗೆ ಕೈಕೊಟ್ಟು ತೆನೆ ಹೊತ್ತ ಹೇಮಾವತಿ! ನೋಟಾ ಪಾಲಾದ ಏಳು ಮತಗಳು! ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಎ.ಭಾಸ್ಕರ್ 593 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ.ಜಿ.ದಿನೇಶ್ ರನ್ನು 115 ಮತಗಳ ಅಂತರದಿಂದ ಸೋಲಿಸಿದ್ದಾರೆ, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಮರು ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಂಡಾಯವಾಗಿ ನಿಂತಿದ್ದ ನಾಗರಾಜು ಕೇವಲ 38 ಮತಗಳನ್ನು ಪಡೆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಮತಿ ಕೋಮಲ 49 ಮತಗಳನ್ನು ಪಡೆದಿದ್ದಾರೆ, ಪೈಪೋಟಿ ನೀಡಿ ಸೋತ ದಿನೇಶ 478 ಮತಗಳನ್ನು ಪಡೆಯುವಲ್ಲಿ ಸಫಲರಾದರು. ಕೈವಶವಾಗಿದ್ದ ಹೇಮಾವತಿ ಮರು ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಯಾದಳು.

ಗೆದ್ದ ಭಾಸ್ಕರ ರವರಿಗೆ ಬೆಂ.ಗ್ರಾ.ಜಿಲ್ಲಾ ಅಧ್ಯಕ್ಷ ಮುನೇಗೌಡರು, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ನಗರ ಅಧ್ಯಕ್ಷ ರವಿಕುಮಾರ್, ನಗರಸಭಾ ಸದಸ್ಯ ಶಿವಕುಮಾರ್, ನಗರಸಭಾ ಅಧ್ಯಕ್ಷ ತ.ನ.ಪ್ರಭುದೇವ್, ಅಭಿನಂದನೆ ಸಲ್ಲಿಸಿದ್ದಾರೆ.

Edited By

Ramesh

Reported By

Ramesh

Comments