ಮೋದಿಯವರನ್ನು ಉಳಿಸುವ ಜವಬ್ದಾರಿ ನಮ್ಮ ಮೇಲಿದೆ, ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ.

13 Jun 2018 9:14 AM |
301 Report

ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ, ಯಾವುದೆ ತರಹದ ರಾಜಕೀಯದ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ, ರಾಜಕಾರಣದ ಹತ್ತಿರವೂ ನಾವುಗಳು ಸುಲಿಯುವುದಿಲ್ಲ, ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ! ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದರು? ಅದ್ಯಾವ ಶಕ್ತಿ ಮೋದಿಯವರಲ್ಲಿದೆ, ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹ ಸಿಕ್ಕಿ ಕೊಂಡೆವು? ಮೋದಿಯವರಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ?

ಅಸಹ್ಯ ಹುಟ್ಟಿಸುವ ರಾಜಕಾರಣಿಗಳ ನಡೆ, ನುಡಿಯಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ  ಈ ದೇಶಕ್ಕೆ ಇನ್ನೂ ಭವಿಷ್ಯವಿಲ್ಲವೆಂದು ತೀರ್ಮಾನಿಸಿ ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖನಾಗಿದ್ದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ. ಮತ್ತೆ ಜನರಲ್ಲಿ ಆಸೆಯೊಂದು ಚಿಗುರು ಹೊಡೆಯಿತ್ತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು, ಭಾರತದ ರಾಜಕಾರಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗ್ರತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲವೆಂದು ಅರಿತ. ಜಗತ್ತಿನಲ್ಲೆ ಯಾವ ರಾಜಕಾರಣಿಗೂ ಈ ರೀತಿ ಶ್ರೀ ಸಾಮಾನ್ಯನು ಪ್ರಚಾರಕನಾಗಿಲ್ಲ, ಭಾರತಿಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗ್ಗಾಗುತ್ತಿದ್ದರು.  ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಜನರನ್ನ ತನ್ನತ್ತ ಸೆಳೆದ! ಭಾರತೀಯರು ಯಾವುದೆ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ. 
ಮೋದಿ ಭಾರತವನ್ನು ಮಾತ್ರ ಬದಲಾಯಿಸುತ್ತಿಲ್ಲ ಭಾರತೀಯ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು. ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಮೋದಿಯ ಮೇಲಿದೆ.  

ಮೋದಿಯ ಉಳಿಸುವ ಜವಬ್ದಾರಿ ನಮ್ಮ ಮೇಲಿದೆ.

ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ.

ಕೃಪೆ: ಅನಾಮದೇಯ ಬರಹಗಾರ! ಫೇಸ್ ಬುಕ್ ನಿಂದ

Edited By

Ramesh

Reported By

Ramesh

Comments