ಯಶಸ್ವಿಯಾಗಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ

14 May 2018 2:31 PM |
343 Report

ನಗರದಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಮತ್ತು ದೃಷ್ಠಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಇಂದು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾನ್ಹ 2 ಘಂಟೆಯವರೆಗೆ ದೃಷ್ಠಿ ಕಣ್ಣಿನ ಆಸ್ಪತ್ರೆ, ಮೊದಲನೇ ಮಹಡಿ, ಜಗನ್ನಾಥ ಕಾಂಪ್ಲೆಕ್ಸ್, ಹಳೇ ಬಸ್ ನಿಲ್ದಾಣ, ಇಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು, ಶಿಬಿರದಲ್ಲಿ ಸಕ್ಕರೆ ಖಾಯಿಲೆ/ ರಕ್ತದ ಒತ್ತಡ ಇರುವ ರೋಗಿಗಳಿಗೆ ಅಕ್ಷಿ ಪಟಲ ಪರೀಕ್ಷೆ ನಡೆಸಲಾಯಿತು. ಡಾ|| ವರಲಕ್ಷ್ಮಿ, ಕಣ್ಣಿನ ತಜ್ಞರು, ಟ್ರಸ್ಟ್ ಅಧ್ಯಕ್ಷರಾದ ಪಿ.ಸಿ.ಲಕ್ಷ್ಮೀನಾರಾಯಣ್, ಕಾರ್ಯದರ್ಶಿ ರಮೇಶ್, ಖಜಾಂಚಿ ದೇರಾನಾ, ಟ್ರಸ್ಟಿಗಳಾದ ಕೆ.ಎಂ.ಕೆ.ಮೂರ್ತಿ, ಸುಧಾಕರ್, ಶಿವಾನಂದ್ ಹಾಜರಿದ್ದರು, ಶಿಬಿರದಲ್ಲಿ 180 ಮಂದಿ ಉಪಯೋಗ ಪಡೆದುಕೊಂಡರು.

Edited By

Ramesh

Reported By

Ramesh

Comments