'ಕೈ' ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟ ಅಂಬಿ ಪಡೆ..!!

10 May 2018 11:11 AM |
20129 Report

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜ್ಯಕೀಯದ ಕಾವು ಹೆಚ್ಚುತ್ತಿದೆ. ಅಲ್ಲದೆ ಪಕ್ಷಾಂತರ ಪರ್ವವು ಹೆಚ್ಚಾಗಿದ್ದು, ಅಂಬರೀಶ್‌ ಜೆಡಿಎಸ್‌ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೇ ಅವರ ಆಪ್ತರು ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಹೌದು..., ಬೆಂಗಳೂರಿನ ಹೆಚ್‌ಎಎಲ್‌‌ ವಿಮಾನ ನಿಲ್ದಾಣದಲ್ಲಿ ಅಂಬರೀಶ್‌ ಆಪ್ತರು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ  ಜೆಡಿಎಸ್‌ ಗೆ ಸೇರ್ಪಡೆಗೊಂಡಿದ್ದಾರೆ. ನಗರಸಭೆ ಮಾಜಿ ಸದಸ್ಯ ರವಿಶಂಕರೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪುರುಷೋತ್ತಮ್, ಆರ್‌‌ಎಪಿಸಿಎಂಎಸ್‌ ಅಧ್ಯಕ್ಷ ಜಗದೀಶ್, ನಗರಸಭೆ ನಾಮಿನಿ ಸದಸ್ಯ ಆನಂದ್, ಚಂದ್ರಶೇಖರ್, ಭರತೇಶ್, ಸಾತನೂರು ಚಂದ್ರು ಸೇರಿದಂತೆ ಹಲವರು ತೆನೆ ಹೊತ್ತಿದ್ದಾರೆ. ಅಂಬರೀಶ್‌ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ ಎನ್ನಲಾಗಿದೆ.  

Edited By

Shruthi G

Reported By

hdk fans

Comments