ಪಿ.ಆರ್ ಸುಧಾಕರ್ ಲಾಲ್ ನಾಮಪತ್ರ ಸಲ್ಲಿಕೆ

21 Apr 2018 6:53 PM |
732 Report

ಕೊರಟಗೆರೆ ಏ:- ಜನಸಾಮಾನ್ಯರ ಪ್ರೀತಿ ವಿಶ್ವಾಸವೇ ಜೆಡಿಎಸ್ ಪಕ್ಷದ ಗೆಲುವಿನ ಶ್ರೀರಕ್ಷೆ ಆಗಲಿದೆ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಶುಕ್ರವಾರ ಜೆಡಿಎಸ್ ಪಕ್ಷದ ವತಿಯಿಂದ ಜೆಡಿಎಸ್ ನಾಮಪತ್ರ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

 

     ಸ್ಥಳೀಯ  ನನ್ನನ್ನು ಮೊದಲು ಆಯ್ಕೆ ಮಾಡಿದ್ದರು ಅದೇ ರೀತಿ ಜನಸಾಮಾನ್ಯರ ಶಾಸಕನಾಗಿ ಕೆಲಸ ಮಾಡಿದ್ದರು ಈ ಬಾರಿಯೂ ಗೆಲ್ಲುವ ವಿಶ್ವಾ ವ್ಯಕ್ತಪಡಿಸಿದರು.
ಚಲನಚಿತ್ರ ನಾಯಕನಟ ನಿಖಿಲ್ಕುಮಾರಸ್ವಾಮಿ ಮಾತನಾಡಿ ರೈತರ ರಕ್ಷಣೆ ಮತ್ತು ಅಭಿವೃದ್ದಿಗಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ಗೆ ಬೆಂಬಲ ನೀಡಬೇಕು. ಕ್ಷೇತ್ರದ ಜನಸಾಮಾನ್ಯರ ಉಳಿವಿಗಾಗಿ ಜೆಡಿಎಸ್ ಪಕ್ಷದ ಯುವ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಸೈನಿಕರಂತೆ ಪಕ್ಷದ ಪರವಾಗಿ ಕೆಲಸ ಮಾಡುವ ಮೂಲಕ ಸುಧಾಕರಲಾಲ್ ಗೆಲ್ಲಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
    ತಾಲೂಕು ಕಚೇರಿಯಲ್ಲಿ ನಾಯಕನಟ ನಿಖಿಲ್ಕುಮಾರ್ ಜೊತೆ ಸುಧಾಕರಲಾಲ್ ಜೆಡಿಎಸ್ ಪಕ್ಷದ ಅಭ್ಯಥರ್ಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮುಖ್ಯರಸ್ತೆ ಮೂಲಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ರೋಡ್ ಶೋ ಮಾಡಿದರು.
   ಮೆರವಣಿಗೆ ವೇಳೆಯಲ್ಲಿ ಕಿರುತೆರೆ ನಟ ಹನುಮಂತೇಗೌಡ ,ಜಿಲ್ಲಾ ಕಾರ್ಯದರ್ಶಿ ಹೆ.ಕೆ ಮಹಾಲಿಂಗಪ್ಪ ಜೆಡಿಎಸ್ ಕಾರ್ಯದ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷರಾದ ಜಿ.ಎಂ ಕಾಮರಾಜು, ಸಿದ್ದಮಲ್ಲಪ್ಪ, ವಕ್ತಾರ ಲಕ್ಷ್ಮೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ನಗರಾಧ್ಯಕ್ಷ ಮಹಮದ್ ಪಾರೂಕ್, ಜಿಪಂ ಸದಸ್ಯರಾದ ಶಿವರಾಮಯ್ಯ, ಪ್ರೇಮಾ, ಅಕ್ಕಮಹಾದೇವಿ, ತಿಮ್ಮಯ್ಯ, ಲಕ್ಷ್ಮೀನರಸೇಗೌಡ, ತಾಪಂ ಸದಸ್ಯರಾದ ಯಲ್ಲಮ್ಮ, ಚಿಕ್ಕನರಸಯ್ಯ, ಗಿರೀಜಾಅರವಿಂದ್, ಬೋರಣ್ಣ, ಕೆಂಪಣ್ಣ, ಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments