ಮಾಜಿ ಕೇಂದ್ರ ಸಚಿವ ಶ್ರೀ ಆರ್.ಎಲ್. ಜಾಲಪ್ಪನವರಿಂದ ತಮ್ಮ ಪುತ್ರ ನರಸಿಂಹಸ್ವಾಮಿ ಪರವಾಗಿ ಮತ ಯಾಚನೆ

19 Apr 2018 6:01 PM |
355 Report

ಕೇಂದ್ರದ ಮಾಜಿ ಸಚಿವರಾದ ಆರ್.ಎಲ್.ಜಾಲಪ್ಪನವರು ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಮಗನಾದ ಜೆ.ನರಸಿಂಹಸ್ವಾಮಿರವರ ಪರವಾಗಿ ಚುನಾವಣಾ ಪ್ರಚಾರ ಮಾಡುವ ಸಲುವಾಗಿ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ್ದರು. ನಗರದಲ್ಲಿರುವ ದೇವರಾಜ ಅರಸು ಕಾಲೇಜಿನಲ್ಲಿ ಎಲ್ಲರನ್ನು ಬೇಟಿಯಾಗಿ ಈ ಬಾರಿ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಮತ ನೀಡಲು ಮನವಿ ಮಾಡಿದರು. ತಾಲ್ಲೂಕಿನ ಎಲ್ಲ ಬಿಜೆಪಿ ಮುಖಂಡರು ಹಾಜರಿದ್ದು ಜಾಲಪ್ಪನವರ ಆಶೀರ್ವಾದ ಪಡೆದುಕೊಂಡರು. ನರಸಿಂಹಸ್ವಾಮಿಯವರು ಮಾತನಾಡುತ್ತಾ ತಮ್ಮ ತಂದೆಯವರಿಗೂ ಈ ಬಾರಿ ನಾನು ಶಾಸಕನಾಗಬೇಕೆಂಬ ಆಸೆ ಇದೆ, ಇದು ನನ್ನ ಕೊನೆಯ ಚುನಾವಣೆ ಮೂರು ಬಾರಿ ನನ್ನನ್ನು ಶಾಸಕನಾಗಿ ಮಾಡಿದ್ದೀರಿ ಈ ಬಾರಿಯೂ ಆರಿಸಿ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

Edited By

Ramesh

Reported By

Ramesh

Comments