ಶಿವಭಕ್ತರಿಗಿಂದ ಹಿರಿಯರಿಲ್ಲ: ಕೆ.ಬಿ ಲೋಕೇಶ್ ಅಭಿಮತ

18 Apr 2018 6:59 PM |
447 Report

ಕೊರಟಗೆರೆ ಏ.:-  ನಾಡಿನಲ್ಲಿ ದಾಸ ಪರಂಪರೆಯ ನಂತರ ವಚನಕಾರರ ಪರಂಪರೆಯ ಮೂಲಕ ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸಿದ ಶ್ರೇಯ ಬಸವಣ್ಣರಿಗೆ ಸಲ್ಲುತ್ತದೆ ಎಂದು ಪಟ್ಟಣದ ಜಗಜ್ಯೋತಿ ವೀರಶೈವ ಬಸವೇಶ್ವರ ಸಂಘದ ಮಾಜಿ ಅಧ್ಯಕ್ಷ ಕೆ.ಬಿ ಲೋಕೇಶ್ ತಿಳಿಸಿದರು.

     ಪಟ್ಟಣ ದಲ್ಲಿ ಬಸವೇಶ್ವರ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಹೆಸರುಬೇಳೆ-ಪಾನಕವನ್ನು ವಿತರಿಸಿ ಮಾತನಾಡಿದರು.
      ಸಮಾಜದಲ್ಲಿರುವಂತಹ ಅಂಕು-ಡೊಂಕುಗಳನ್ನು ತಮ್ಮ ವಚನಾಮೃತಗಳಿಂದಲೇ ತಿದ್ದುತ್ತಾ, ಎನಗಿಂತ ಕಿರಿಯರಾರಿಲ್ಲ... ಶಿವಭಕ್ತರಿಗಿಂತ ಹಿರಿಯರಾರಿಲ್ಲ ಎನ್ನುವ ಮೂಲಕ ಭಕ್ತಿಯೊಂದಿಗೆ ಕಾಯಕನಿಷ್ಠೆಯನ್ನು ತಿಳಿಸಿ ಹೇಗೆ ಸಮಾಜವನ್ನು ಪರಿವರ್ತಿಸಿದ ಮಹಾಪುರುಷ ಎಂದರು.
    ಈ ಸಂದರ್ಭದಲ್ಲಿ ಹುಲೀಕುಂಟೆ ಗ್ರಾ.ಪಂ ಸದಸ್ಯ ಶ್ರೀರಾಮಯ್ಯ, ಗುಂಡಿನಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ. ಶಿವಕುಮಾರ್, ತುಮಕೂರು ನಗರಸಭಾ ಮಾಜಿ ಉಪಾದ್ಯಕ್ಷ ವಾಲೆಚಂದ್ರಯ್ಯ, ಜಗಜ್ಯೋತಿ ಮಹಿಳಾ ಸಂಘದ ಸದಸ್ಯೆಯರಾದ ಚಂದ್ರಕಲಾ, ಡಿ. ಮಮತಾ, ಮುಖಂಡರಾದ ಲಕ್ಷೀಶ್, ನಾಗಾನಾಯಕ್, ಬೋರ್ರ್ವೆಲ್ ರಮೇಶ್, ರಂಗನಾಥಪ್ಪ, ತಿಮ್ಮಣ್ಣ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments