ಪತಂಜಲಿ" ವಸಂತ "ಶಿಭಿರ
ಕೊರಟಗೆರೆ ಏ. 10:- ಪತಂಜಲಿ ಯೋಗ ಶಿಕ್ಷಣ ಸಮಿತಿ ಕೊರಟಗೆರೆ ಶಾಖೆಯ ವತಿಯಿಂದ ಏ.11 ರಿಂದ ಮೇ.3 ರ ವರೆಗೆ ಉಚಿತ ವಸಂತ ಶಿಭಿರನ್ನು ಆಯೋಜಿಸಿದೆ.
12 ರಿಂದ 17 ವರ್ಷದ ವಯೋಮಾನದ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಶಿಬಿರದಲ್ಲಿ ಯೋಗ, ಸ್ಥಳೀಯ ಆಟಗಳು, ಕಥೆ ಹೇಳುವುದು, ಚಾರಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಶಿಭಿರ ಬೆಳಿಗ್ಗೆ 6 ರಿಂದ 7.30 ರ ವರೆಗೆ ನಡೆಯಲಿದೆ.
ತಾಲೂಕಿನ ತುಂಬಾಡಿ ಗ್ರಾಮದಲ್ಲಿನ ಆಂಜನೇಯ ಸ್ವಾಮಿ ದೇವಾಲಯ, ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನ, ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿವೆ. ಮಾಹಿತಿಗೆ ಮೊ. 9845820993,9902348810,9480991419 ಸಂಪರ್ಕಿಸಿ.
Comments