A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಭವ್ಯ ಸ್ವಾಗತದೊಂದಿಗೆ ಕುಮಾರಣ್ಣ ನನ್ನು ಬರಮಾಡಿಕೊಂಡ ತಲಕಾಡಿನ ಅಭಿಮಾನಿಗಳು..!! | Civic News

ಭವ್ಯ ಸ್ವಾಗತದೊಂದಿಗೆ ಕುಮಾರಣ್ಣ ನನ್ನು ಬರಮಾಡಿಕೊಂಡ ತಲಕಾಡಿನ ಅಭಿಮಾನಿಗಳು..!!

29 Mar 2018 12:16 PM |
1402 Report

ಟಿ.ನರಸೀಪುರ ಕ್ಷೇತ್ರದಲ್ಲಿ ಮರಳು ಮಾಫಿಯಾ ದೊರೆಗಳನ್ನು ಮಟ್ಟಹಾಕಿ ಜಾತ್ಯತೀತ ಜನತಾದಳ ಅಭ್ಯರ್ಥಿ ಎಂ.ಅಶ್ವಿನ್‍ಕುಮಾರ್ ಅವರನ್ನು ಬೆಂಬಲಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. ವಿಕಾಸ ಪರ್ವ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ವಾಟಾಳು ಶ್ರೀ ಸೂರ್ಯ ಸಿಂಹಾನಸ ಮಠಕ್ಕೆ ತೆರಳಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿ.ನರಸೀಪುರದಲ್ಲಿ ಕ್ಷೇತ್ರದ ಸಚಿವರು ಹಾಗೂ ಅವರ ಮಕ್ಕಳು ಮರಳು ಮಾಫಿಯಾದಲ್ಲಿ ತೊಡಗಿ ಹಣ ಲೂಟಿ ಮಾಡುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಜನತೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಬೆಂಬಲಿಸಿ ನಮ್ಮನ್ನು ಆಶೀರ್ವದಿಸುವಂತೆ ಅವರು ಮನವಿ ಮಾಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಈವರೆಗೆ ಅಮಾಯಕ ಮರಳು ಕೂಲಿ ಕಾರ್ಮಿಕರ ಮೇಲೆ ಹಾಕಿರುವ ಮೊಕದ್ದಮೆ ವಾಪಸ್ ಪಡೆದು ಅವರಿಂದ ವಶಪಡಿಸಿಕೊಂಡಿರುವ ವಾಹನಗಳನ್ನು ಜಫ್ತಿ ಮಾಡಿದವರಿಂದಲೇ ಪರಿಹಾರ ಕೊಡಿಸುವುದಾಗಿ ತಿಳಿಸಿದರು. ಅಧಿಕಾರದ ಆಸೆಗಾಗಿ ನಾನು ರಾಜ್ಯ ಪ್ರವಾಸ ಮಾಡುತ್ತಿಲ್ಲ. ನನ್ನ ಆನಾರೋಗ್ಯದ ನಡುವೆಯೂ ರೈತರ ಪರವಾಗಿ ಹೋರಾಟ ಮಾಡುತ್ತಿದ್ದು, ನಮ್ಮ ಹೋರಾಟ ರಾಜ್ಯದ ರೈತರ ಸಾಲಮನ್ನಾ ಮಾಡಿಸುವ ಸಲುವಾಗಿ ಮಾತ್ರ ಎಂದು ಹೇಳಿದರು. ಇದಕ್ಕೂ ಮೊದಲು ತಾಲ್ಲೂಕಿನ ತಲಕಾಡು ಸಮೀಪದ ಮಡವಾಡಿ ಗ್ರಾಮಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಹಸ್ತ್ರಾರು ಮಂದಿ ಕಾರ್ಯಕರ್ತರು ಸ್ವಾಗತ ನೀಡಿದರು. ಆನಂತರ ತೆರೆದ ವಾಹನದಲ್ಲಿ ತಲಕಾಡು, ಹೆಮ್ಮಿಗೆ, ಮಾದಾಪುರ, ಮೂಗೂರು, ಮಾರ್ಗವಾಗಿ ಗ್ರಾಮಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರಿಗೆ ದಾರಿಯುದ್ದಕ್ಕೂ ಅಭಿಮಾನಿಗಳು ಭಾರೀ ಗಾತ್ರದ 12 ಅಡಿ ಉದ್ದ, 250 ಕೆ.ಜಿ. ತೂಕವಿದ್ದ ರಾಗಿತೆನೆಯ ಹಾರ ಹಾಕಿ ಕ್ರೇನ್‍ ಮೂಲಕ ಸ್ವಾಗತಿಸಿದರು.

 

Edited By

Shruthi G

Reported By

hdk fans

Comments