ಚುನಾವಣೆ ಹಿನ್ನೆಲೆ ಸಿದ್ದರಾಮಯ್ಯ ನವರ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಎಚ್ ಡಿಕೆ

29 Mar 2018 9:51 AM |
10546 Report

ಸಿ ಪೋರ್ ಕಂಪನಿ ಮಾಲಿಕ ಸಿದ್ದರಾಮಯ್ಯ ಜೊತೆಗೆ ಇರ್ತಾರೆ. ಸಿ ಪೋರ್ ಸಮೀಕ್ಷೆ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಕರ್ನಾಟಕದ ಜನ ಸಮೀಕ್ಷೆ ಬುಡಮೇಲು ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಎಚ್.ಡಿ ಕುಮಾರಸ್ವಾಮಿ, ಸಮೀಕ್ಷೆಗಳು ಸಿದ್ದರಾಮಯ್ಯ ಅವರಿಗೆ ಫಲ ಕೊಡಲ್ಲ. ಮೈಸೂರು ಜನತೆ ನಾಡಿ ಮಿಡಿತ ನನಗೆ ಅರ್ಥವಾಗಿದೆ ಎಂದರು.

ಈ ಬಾರಿ ಹಾಸನ ಜಿಲ್ಲೆ, ಮಂಡ್ಯ ಜಿಲ್ಲೆಯಲ್ಲಿ 14 ಕ್ಷೇತ್ರಗಳಲ್ಲಿ ನಾವೇ ಗೆಲ್ಲೊದು ಕಾಂಗ್ರೆಸ್ ಗೆ ಮಂಡ್ಯ,ಹಾಸನದಲ್ಲಿ ಶೂನ್ಯ ಸಿಗುತ್ತದೆ ಎಂದು ಭವಿಷ್ಯ ನುಡಿದರು. ಅಮಿತ್ ಶಾ ಗೆ ಈಗ ತೆಂಗು, ಅಡಿಗೆ ಬೆಳೆ ಗಾರರ ನೆನಪಾಗಿದೆ. ಅಮಿತ್ ಶಾ ಅಂತರಾಳದ ಭಾವನೆ ಅರ್ಥವಾಗಿದೆ. ದೇಶದ ನಂ 1 ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಅವರೇ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಹಣ ಹಂಚಲು ಕಾಂಗ್ರೆಸ್ ಕೆಂಪಯ್ಯರನ್ನು ನೇಮಿಸಿದೆ ಎಂದು ಆರೋಪಿಸಿದ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಒಂದು ಓಟ್ ಗೆ 500, 1000 ಕೊಡಲು ಫಿಕ್ಸ್ ಆಗಿದೆ. ಹಣದ ಮೂಲಕವೇ ಗೆಲ್ಲುತ್ತೇವೆ ಅಂತಾ ಹೇಳಿದ್ದಾರೆ. ಶಾಲಾ ಮಕ್ಕಳು ಸಿದ್ದರಾಮಯ್ಯ ಅವರ ಬೋರ್ಡ್ ಗೆ ಅರಿವಿಲ್ಲದ ಮಕ್ಕಳೇ ಕಲ್ಲು ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಕ್ಕರೆ ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಚಾಟಿ ಬೀಸಿದರು. ಚುನಾವಣಾ ಆಯೋಗ ಕೆಂಪಯ್ಯ ಮೇಲೆ ನಿಗಾ ವಹಿಸಬೇಕಿದೆ. ಕೆಂಪಯ್ಯ ಮೇಲೆ ಕಣ್ಣಿಡುವಂತೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇನೆ ಎಂದರು. ಈಗಲೂ ಚಾಮುಂಡೇಶ್ಚರಿಯಲ್ಲಿ ಸಿಎಂ ಸಿದ್ದರಾಮಯ್ಯ ನಿಲ್ಲೊದಿಲ್ಲ. ಚಾಮುಂಡೇರಿಯಲ್ಲಿ ಸಿದ್ದರಾಮಯ್ಯ ನಿಂತ್ರೆ ಸೋಲು ಗ್ಯಾರಂಟಿ. ಹೀಗಾಗಿ ಎನ್.ಆರ್. ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಚಾಮುಂಡೇಶ್ಚರಿ ಕ್ಷೇತ್ರ ಬಿಟ್ಟು ಎನ್.ಆರ್. ಕ್ಷೇತ್ರಕ್ಕೆ ಹೋದ್ರು ಆಶ್ಚರ್ಯ ಪಡುವಂತಿಲ್ಲ. ಸಿಎಂ ನಾನೊಬ್ಬನೇ ಮುಸ್ಲಿಂ ಚಾಂಪಿಯನ್ ಅಂತಾ ಅಂದು ಕೊಂಡಿದಾರೆ. ಎಲ್ಲಿ ನಿಲ್ಲುತ್ತಾರೋ ನೋಡೋಣ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Edited By

Shruthi G

Reported By

hdk fans

Comments