ಕಾಂಗ್ರೆಸ್ ನಾಶಕ್ಕೆ ಎಚ್ಚರಿಕೆ ಘಂಟೆ ಭಾರಿಸಿದ ಕುಮಾರಣ್ಣ

07 Mar 2018 11:17 AM |
6378 Report

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷ ಪಕ್ಷಗಳ ನಡುವೆ ಪೈಪೋಟಿ ನಡೆಯುವುದು ಸಾಮಾನ್ಯವೇ ಸರಿ, ಆದರೆ ಕಾಂಗ್ರೆಸ್ ಪ್ರತಿ ಭಾರಿಯೂ ಜೆಡಿಎಸ್ ನ್ನು ಅಣಕಿಸುತ್ತಾ ಬಂದಿದೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಿರದಿದ್ದರು ಪ್ರತಿಪಕ್ಷಗಳನ್ನು ನಿಂದಿಸುವುದನ್ನು ಮಾತ್ರ ಬಿಟ್ಟಿಲ್ಲ. ಜೆಡಿಎಸ್ ಕಾಂಗ್ರೆಸ್ ನ ಈ ದೂರದಾಡಳಿತಕ್ಕೆ ಕಡಿವಾಣ ಹಾಕಲಿದೆ.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ದೇಶದ ಒಂದು ಕಡೆ ಇರುವ ನೆಲೆಯೂ ಸರ್ವನಾಶ ಆದೀತು ಎಂದು ಕಾಂಗ್ರೆಸ್ ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಯವರು, ರಾಜ್ಯದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆಯ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ, ಬೆಂಬಲ ನೀಡಿ ಎಂದು ನಾವು ನಿಮಗೆ ಅರ್ಜಿ ಹಾಕಿಲ್ಲ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಬೆಂಬಲ ಕೋರಿ ನಮ್ಮ ಮನೆಗೆ ಬಂದವರು ನೀವು. ನಿಮಗೆ ಕಷ್ಟ ಆದಾಗ ನಮ್ಮನೆ ಬಾಗಿಲಿಗೆ ಬಂದಿದ್ದೀರಿ. ನಿಮ್ಮ ದುರಾಹಂಕಾರ ನಿಲ್ಲಿಸಿ ಎಂದು ತಿರುಗೇಟು ನೀಡಿದ್ದಾರೆ. ಚುನಾವಣೆ ಎದುರಿಸುವ ಸಂಪೂರ್ಣ ಶಕ್ತಿ ಜೆಡಿಎಸ್ ಗೆ ಇದೆ. ಸಿಎಂಗೆ ಅಧಿಕಾರದ ಮದ ಏರಿದೆ. ಬನ್ನಿ ಚುನಾವಣೆಗೆ, ನಾವು ಏನೂಂತ ತೋರಿಸ್ತೀವಿ ಎಂದು ಸವಾಲು ಹಾಕಿದರು.

 

 

Edited By

Shruthi G

Reported By

hdk fans

Comments