ಎರಡು ಬಾರಿ ಆಸ್ಕರ ಪಡೆದ ಹಾಲಿವುಡ್ ನಟ ಭಾರತದ ಕುರಿತು ಹಾಗೂ ಹಿಂದೂ ಧರ್ಮದ ಕುರಿತು ಏನು ಹೇಳಿದ್ದಾನೆ ಕೇಳಿ

03 Mar 2018 3:39 PM |
1421 Report

“ನನಗೆ ಭಾರತವೆಂದರೆ ತುಂಬಾ ಇಷ್ಟ. ನಾನು ಇಂದು ಇಷ್ಟು ಯಶಸ್ಸು ಗಳಿಸಿರೋದಕ್ಕೆ ಕಾರಣ ಭಗದ್ಗೀತೆ” ಎಂದು ಎರಡು ಬಾರಿ ಆಸ್ಕರ ಪಡೆದ ಹಾಲಿವುಡ್ ನಟ ವಿಲ್ ಸ್ಮಿತ್ ಹೇಳಿದ್ದರು. ಇದು ಭಾರತದ ಹೆಮ್ಮೆ, ಭಾರತೀಯರ ಹೆಮ್ಮೆ.

ವಿಲ್ ಸ್ಮಿತ್ ಇತ್ತೀಚೆಗೆ ಭಾರತಕ್ಕೆ ಬಂದದ್ದು ಅದು ಅವರ ಭಾರತದ ನಾಲ್ಕನೇ ಭೇಟಿ. ಇತ್ತೀಚಿಗೆ ಬಂದಿದ್ದರ ಕಾರವೇನೆಂದರೆ ಅವರ ಮುಂದಿನ ಸಿನೆಮಾ “ಬ್ರೈಟ್” ಎಂಬ ಚಿತ್ರದ ಪ್ರಚಾರದ ಸಲುವಾಗಿ.“ನಾನಿಂದು 90% ಪರಿಪೂರ್ಣ ಆಗಿರೋದು ಭಗವ್ದೀತೆಯಿಂದ” ಅಂತ ಹೇಳಿ ಎಲ್ಲರ ಹುಬ್ಬೇರುವಂತೆ ಮಾತಾಡಿದ್ದರು. “ಈಗಾಗಲೇ ಭಗವದ್ಗೀತೆಯ 90% ಭಾಗವನ್ನು ಓದಿದ್ದೇನೆ. ಭಗವದ್ಗೀತೆ ಓದುವುದೆಂದರೆ ನನಗೆ ತುಂಬಾ ಇಷ್ಟ. ಮುಂದಿನ ಬಾರಿ ನಾನು ಬಂದು ಹಿಂದೂ ಧರ್ಮದ ಪವಿತ್ರ ಸ್ಥಳವಾದ ರಿಷಿಕೇಶಕ್ಕೆ ಹೋಗುತ್ತೇನೆ” ಎಂದು ಅವರು ತಮ್ಮ ಹಿಂದು ಧರ್ಮದೆಡೆಗಿನ ಗೌರವ, ಪ್ರೀತಿಯನ್ನು ತೋರಿಸಿದ್ದರು.

ಇದು ಭಾರತೀಯರು ಹೆಮ್ಮೆ ಪಡಲೇಬೇಕಾದ ವಿಷಯ. ನಮ್ಮಲ್ಲೇ ಅನೇಕರಿಗೆ ಭಗವದ್ಗೀತೆಯ ಬಗ್ಗೆ ಗೊತ್ತಿಲ್ಲ.‌ಓದುವ ಆಸಕ್ತಿಯೂ ಇಲ್ಲ. ಕೆಲವರಂತೂ ಭಗವದ್ಗೀತೆಯನ್ನು ಸುಟ್ಟು ಹಾಕುವ ಮಾತುಗಳನ್ನಾಡುತ್ತಾರೆ. ಇವರೆಲ್ಲ ವಿಲ್ ಸ್ಮಿತ್ ಅವರಿಂದ ಕಲಿಯಬೇಕು.

Edited By

Yuva Morcha

Reported By

Yuva Morcha

Comments