ದೇವಾಂಗ ಮಹಾ ಸಮ್ಮೇಳನ-2018 ಉದ್ಘಾಟನೆ ದೇವೇಗೌಡರು ಮಾಜಿ ಪ್ರಧಾನ ಮಂತ್ರಿಗಳು, ದಿವ್ಯಸಾನಿಧ್ಯ ಶ್ರೀ ದಯಾನಂದಪುರಿ ಮಹಾ ಸ್ವಾಮೀಜಿಯವರು

26 Feb 2018 12:16 PM |
1121 Report

ಮಾರ್ಚ್ 4 ರಂದು ಬೆಳಿಗ್ಗೆ 8-30 ದತ್ತಾತ್ರೇಯ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ಚೌಡೇಶ್ವರಿದೇವಿ ಅಮ್ಮನವರ ಪ್ರತಿಷ್ಠಾಪನೆ ಮತ್ತು ನಂದಿ ದ್ವಜಾರೋಹಣದೊಂದಿಗೆ ದೇವಾಂಗ ಮಹಾ ಸಮ್ಮೇಳನ ಕಾರ್ಯಕ್ರಮ ಆರಂಭವಾಗಲಿದೆ. 4ಮತ್ತು 5 ರಂದು ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀದಯಾ ನಂದಪುರಿ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ, ಸಮ್ಮೇಳನಾಧ್ಯಕ್ಷರಾಗಿ ವಾಣಿಜ್ಯೋದ್ಯಮಿ ಶ್ರೀ ಹೆಚ್.ಪಿ.ಶಂಕರ್ ಭಾಗವಹಿಸಲಿರುವ ಈ ಕಾರ್ಯಕ್ರಮದ ಅಂಕುರಾರ್ಪಣೆಯನ್ನು ಶ್ರೀ ತಿಮ್ಮಶೆಟ್ಟಪ್ಪ, ಅಧ್ಯಕ್ಷರು ದೇವಾಂಗ ಮಂಡಲಿ ನೆರವೇರಿಸುವರು, ನಂದಿ ದ್ವಜಾರೋಹಣವನ್ನು ಶ್ರೀ ಮುನೇಗೌಡರು, ಕಾರ್ಯಾಧ್ಯಕ್ಷರು, ಒಕ್ಕಲಿಗರ ಸಂಘ, ಬೆಂ. ನೇರವೇರಿಸಲಿದ್ದಾರೆ, ಮದ್ಯಾನ್ಹ 2 ಘಂಟೆಗೆ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು, ಮಾಜಿ ಪ್ರಧಾನ ಮಂತ್ರಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಶ್ರೀ ವೆಂಕಟರಮಣಯ್ಯ, ಮಾಜಿ ಶಾಸಕ ಶ್ರೀ ನರಸಿಂಹಸ್ವಾಮಿ, ಶ್ರೀ ಪಿ.ಸಿ. ಲಕ್ಷ್ಮೀನಾರಾಯಣ್, ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ.

Edited By

Ramesh

Reported By

Ramesh

Comments