ಕುತೂಹಲಕ್ಕಿಡಾಗಿರುವ ವರುಣಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ..!!

08 Feb 2018 6:50 PM |
281 Report

ತಿ.ನರಸೀಪುರ ಪಟ್ಟಣದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ  ವರುಣಾಕ್ಷೇತ್ರದ ಜೆಡಿಎಸ್​​​ ಸಭೆ ಕರೆಯಲಾಗಿತ್ತು . ರಾಜ್ಯದಲ್ಲಿ ಚುನಾವಣೆ ಸಮಿಪಿಸುತ್ತಿದ್ದು, ಅದರಲ್ಲೂ ಪ್ರಮುಖ ಕುತೂಹಲ ಕ್ಷೇತ್ರವಾದ ಸಿಎಂ ಸಿದ್ದರಾಮಯ್ಯ ನವರ ತವರು ವರುಣಾ ಕ್ಷೇತ್ರದಲ್ಲಿ ಜೆಡಿಎಸ್​​​ ಗೆಲ್ಲಲು ಪ್ಲಾನ್​ ಆರಂಭಸಿದೆ.

ಎಲ್ಲಾ ಪಕ್ಷಗಳಿಗಿಂತ ಮುಂದಿರುವ ಜೆಡಿಎಸ್​​ ವರುಣಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿ ಸಂಚಲನ ಮೂಡಿಸಿದೆ. ನಿನ್ನೆ ಕರೆದ ಸಭೆಯಲ್ಲಿ ವರುಣಾಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್ ಪಕ್ಷದ  ವರಿಷ್ಠರ ಸೂಚನೆಯಂತೆ ನಾನು ವೀರಶೈವ ಲಿಂಗಾಯತ ಸಮುದಾಯದ ಅಭಿಷೇಕ್ ಅವರನ್ನು ಜೆಡಿಎಸ್​​ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Edited By

Shruthi G

Reported By

hdk fans

Comments