ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ನಾಟಕೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು

29 Jan 2018 5:50 AM |
630 Report

ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಮಿತಿ ವತಿಯಿಂದ ದಿನಾಂಕ 2-2-18ರ ಶುಕ್ರವಾರ ರಾತ್ರಿ 9-30ಕ್ಕೆ ದಿ|| ಶ್ರೀ ಗೋಪೀನಾಥ್ ರವರ ಕಲಾ ಬಳಗ, ಶ್ರೀಕ್ಷೇತ್ರ ಚಿಕ್ಕ ಮದುರೆ, ಕನಸವಾಡಿ, ಇವರಿಂದ ಶ್ರೀನಿವಾಸ ಕಲ್ಯಾಣ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ, ಹಾಗೂ ದಿ. 3-2-18ನೇ ಶನಿವಾರ ಸಂಜೆ 7-30ಕ್ಕೆ ಸಮಷ್ಠಿ ಜನಪದ ಕಲಾ ತಂಡದವರಿಂದ ಶ್ರೀ ಕೃಷ್ಣ ಸಂಧಾನ ಹಾಸ್ಯಮಯ ಸಾಮಾಜಿಕ ನಾಟಕ ಮತ್ತು ರಾತ್ರಿ 9-30ಕ್ಕೆ ಶ್ರೀ ಅಭಯ ಆಂಜನೇಯಸ್ವಾಮಿ ನಾಟಕ ಮಂಡಳಿ, ಆಲಹಳ್ಳಿ ಇವರಿಂದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.

Edited By

Ramesh

Reported By

Ramesh

Comments