ಸಿ.ಪಿ.ಯೋಗೀಶ್ವರಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್

05 Jan 2018 1:19 PM |
2002 Report

ತುಮಕೂರಿನಲ್ಲಿ ಮಾತನಾಡಿದ ಅವರು, ಮಹಿಳೆಯ ಕೈಯಲ್ಲಿ ಪೊರಕೆಯಿಂದ ಡಿ.ಕೆ.ಶಿವಕುಮಾರ ಅವರನ್ನು ಹೊಡೆಸುತ್ತೇನೆ ಎಂದು ಸಿ.ಪಿ.ಯೋಗೀಶ್ವರ್ ಅವರು ನೀಡಿದ್ದ ಹೇಳಿಕೆಗೆ, ಈ ರೀತಿ ಹೇಳಿದ್ದಾರೆ. ಜನರು ಯಾವಾಗ ಬೇಕಾದರೂ ಪೊರಕೆಯಿಂದ ಹೊಡೆಯಲಿ, ನಾನು ಪೊರಕೆ ಏಟು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಶಾಸಕ ಸಿ.ಪಿ.ಯೋಗೀಶ್ವರ್ ಅವರಿಗೆಡಿ.ಕೆ.ಶಿವಕುಮಾರ ಚನ್ನಪಟ್ಟಣ ತಿರುಗೇಟು ನೀಡಿದ್ದಾರೆ.

ಚನ್ನಪಟ್ಟಣದ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅಲ್ಲಿಯಜನರೊಂದಿಗೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಹೇಳಿದ್ದೇನೆ.

ಆದರೆ ಅವರ ಹಾಗೇಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ ಎಂದಿದ್ದಾರೆ. ಚನ್ನಪಟ್ಟಣದಲ್ಲಿ ಸಾಮಾನ್ಯ ವ್ಯಕ್ತಿಯನ್ನು ಕಣಕ್ಕಿಳಿಸಿ ಡಿ.ಕೆ.ಶಿವಕುಮಾರ ಅವರ ವಿರುದ್ಧ ಗೆಲ್ಲಿಸುತ್ತೇನೆ. ಸ್ಪರ್ಧೆ ಮಾಡಲಿ ಎಂದು ಸಿ.ಪಿ.ಯೋಗೀಶ್ವರ್ ಹಾಕಿದ್ದ ಸವಾಲಿಗೆ ಪ್ರತಿಕ್ರಿಯೆ ನೀಡಿ, ಚನ್ನಪಟ್ಟಣದಲ್ಲಿ ಅವರು ಮೊದಲು ಗೆಲ್ಲಲಿ, ನಂತರ ನನ್ನ ವಿರುದ್ಧ ಸಾಮಾನ್ಯರನ್ನು ಕಣಕ್ಕಿಳಿಸಲಿ ಎಂದು ತಿಳಿಸಿದ್ದಾರೆ.

Edited By

dks fans

Reported By

dks fans

Comments