ಕುಮಾರಣ್ಣನ ಆಡಳಿತ ವೈಖರಿಯನ್ನು ಮೆಚ್ಚಿಕೊಂಡ ಚಕ್ರವರ್ತಿ ಸೂಲಿಬೆಲೆ

03 Jan 2018 1:27 PM |
16128 Report

ಕಳೆದ ಬಾರಿ ಚುನಾವಣೆಯಲ್ಲಿ,  ರಾಜ್ಯದಲ್ಲಿ ಬಿಜೆಪಿ ಗೆಲ್ಲಲ್ಲು ಚಕ್ರವರ್ತಿ ಸೂಲಿಬೆಲೆಯವರ ಕೊಡುಗೆ ಹೆಚ್ಚಿದೆ. ಆದರೆ ರಾಜ್ಯ ಬಿಜೆಪಿ ನಾಯಕರಿಂದ ರಾಜ್ಯಕ್ಕೆ ಯಾವುದೇ ರೀತಿಯ ಉಪಯೋಗವಾಗಿಲ್ಲ.  ತಮಿಳುನಾಡಿನಲ್ಲಿ ಪ್ರಾಕೃತಿಕ ವಿಕೋಪ ಎದುರಾದಾಗ, ಚೆನ್ನೈಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚು ವಿಕೋಪಗಳು ಕರ್ನಾಟಕದಲ್ಲಿ ಆಗಿದೆ. ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದೆ.

ಕನಿಷ್ಠವಾದರೂ ಕುಡಿಯುವ ನೀರಿನ ವಿಚಾರಕ್ಕೆ ಮಾನವೀಯತೆ ದೃಷ್ಟಿಯಿಂದ ಸ್ವಾರ್ಥವನ್ನು ಬಿಟ್ಟು,ಸಮಸ್ಯೆ ಯನ್ನು ಬಗೆಹರಿಸಬಹುದಿತ್ತು. ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರದಿಂದ ಜನಕ್ಕೆ ಕೊಟ್ಟ ಯಾವುದೇ ಭರವಸೆಗಳನ್ನು ಕೂಡ ಈಡೇರಿಸಿಲ್ಲ ಹಾಗು ಕೇವಲ ಅಭಿವೃದ್ಧಿ ಎನ್ನುವುದು ಭಾಷಣಕ್ಕೆ ಅಷ್ಟೇ ಸೀಮಿತಗೊಂಡಿರುವುದು ಮಹದಾಯಿ ವಿಚಾರದಲ್ಲಿ ಕೊಟ್ಟ ಆಶ್ವಾಸನೆಯನ್ನು ಈಡೇರಿಸಲಾಗದೆ ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವುದು, ಇದರಿಂದ ಕಳಚಿ ಬಿದ್ದ  ಬಿಜೆಪಿಯವರ  ಮುಖವಾಡ  ಇವೆಲ್ಲವನ್ನೂ ಗಮನಿಸಿದ ಚಕ್ರವರ್ತಿ ಸೂಲಿಬೆಲೆಯವರು ಕುಮಾರಣ್ಣನ 20 ತಿಂಗಳ ಆಡಳಿತ ವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಕರ್ನಾಟಕ ಮತ್ತು ಕನ್ನಡ ಉಳಿಯಬೇಕೆಂದರೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಈ ಹಿಂದೆ ಕುಮಾರಣ್ಣನ ವಿಕಾಸವಾಹಿನಿಗೆ ಬೆಂಬಲ ನೀಡಿದ ಸೂಲಿಬೆಲೆಯವರು ಕುಮಾರಣ್ಣನವರು ಹಿರಿಯರೊಂದಿಗೆ ನಡೆಸುತ್ತಿರುವ ಸಂವಾದ ಕಾರ್ಯಕ್ರಮವನ್ನು ಪ್ರಶಂಸಿದ್ದಾರೆ. ಮುಂದಿನ ದಿನಗಳಲ್ಲಿ ಜಾತಿ ಧರ್ಮದ ಆಧಾರಕ್ಕಿಂತ ಅಭಿವೃದ್ಧಿ  ಪಥದತ್ತ ಹೆಜ್ಜೆಯನ್ನಿಟ್ಟಿರುವ ಕುಮಾರಪಥಕ್ಕೆ ಬೆಂಬಲ ನೀಡುವಂತೆ ಯುವಕರಿಗೆ ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಬಹಿರಂಗವಾಗಿ ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರ ಮಾಡುವ ಸಂಭವ ಕೂಡ ಇರಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.

 

Edited By

hdk fans

Reported By

hdk fans

Comments