ದೊಡ್ಡಬಳ್ಳಾಪುರ ತಾಲ್ಲೂಕು ಛಾಯಾಗ್ರಾಹಕರ ಸಂಘದ ಬೆಳ್ಳಿಹಬ್ಬಕ್ಕೆ ಚಿತ್ರನಟ ಧೃವಸರ್ಜ, ನಟಿ ಅಪೇಕ್ಷ ಆಗಮನ

25 Dec 2017 6:18 AM |
516 Report

ಡಿ.೨೬-೨೭ರಂದು ನಡೆಯುವ ತಾಲ್ಲೂಕು ಛಾಯಾಗ್ರಾಹಕರ ಸಂಘದ ಬೆಳ್ಳಿಹಬ್ಬ ವಿಜೃಂಭಣೆಯಿಂದ ನಡೆಯಲಿದೆ, ೨೬ರ ಮಂಗಳವಾರ ಬೆಳಿಗ್ಗೆ ಶ್ರೀ ಶ್ರೀ ಮಂಗಳಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠ, ಚಿಕ್ಕಬಳ್ಳಾಪುರ, ಇವರ ದಿವ್ಯ ಸಾನಿದ್ಯದಲ್ಲಿ ೧೦-೩೦ಕ್ಕೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ವಸ್ತುಪ್ರದರ್ಶನದ ಮಳಿಗೆಗಳನ್ನು ಶ್ರೀ ಪಂಕಜ್, ಬೋಲಾಸ್ ಕಲರ್ ಲ್ಯಾಬ್ ಮತ್ತು ಶ್ರೀ ಉದಯಕುಮಾರ್, ಉದಯ್ ಕಲರ್ ಲ್ಯಾಬ್ ಇವರು ಉದ್ಘಾಟಿಸುವರು. ಛಾಯಾಚಿತ್ರ ಪ್ರದರ್ಶನವನ್ನು ಶ್ರೀ ಟಿ.ಎಸ್. ಮಹದೇವಯ್ಯ, ವಾಣಿಜ್ಯೋದ್ಯಮಿಗಳು, ಉದ್ಘಾಟಿಸುವರು. ೨೬ರ ಸಂಜೆ ೬-೩೦ಕ್ಕೆ ಕೃಷ್ಣ ಬಲಬದ್ರಿ ಮತ್ತು ತಂಡದವರಿಂದ ಮದುರ ಮದುರವೀ ಮಂಜುಳಗಾನ ಸಂಗೀತ ಸಂಜೆ ಕಾರ್ಯಕ್ರಮವಿರುತ್ತದೆ.

Edited By

Ramesh

Reported By

Ramesh

Comments