ನಗರಸಭಾಧ್ಯಕ್ಷ ತ.ನ. ಪ್ರಭುದೇವ್ ರವರಿಂದ ಮಾಜಿ ಶಾಸಕ ಶ್ರೀ ಜೆ.ನರಸಿಂಹಸ್ವಾಮಿಯವರಿಗೆ ಅಭಿನಂದನೆ.

17 Dec 2017 6:05 PM |
336 Report

ನೂತನ ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ರವರು ಈ ದಿನ ನಗರಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಬಿಜೆಪಿ ಪಕ್ಷದ ನಗರಸಭಾ ಅಧ್ಯಕ್ಷರನ್ನು ಅವಧಿ ಮುಗಿದ ತಕ್ಷಣವೇ ರಾಜೀನಾಮೆಯನ್ನು ಕೊಡಿಸಿ ನಗರಸಭಾ ಅಧ್ಯಕ್ಷರ ಚುನಾವಣೆಯಲ್ಲಿ ಬೇಷರತ್ತಾಗಿ ಬೆಂಬಲವನ್ನು ನೀಡಿ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಿದ ಜನಪ್ರಿಯ ಮಾಜಿ ಶಾಸಕ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಜೆ.ನರಸಿಂಹಸ್ವಾಮಿರವರನ್ನು ನಗರದ ಐಬಿಯಲ್ಲಿ ಅಭಿನಂದಿಸಿದರು. ನಗರಸಭಾ ಸದಸ್ಯ ಶಿವಶಂಕರ್, ಮಾಜಿ ಅಧ್ಯಕ್ಷರಾದ ಮುದ್ದಪ್ಪನವರೊಂದಿಗೆ ಹಲವಾರು ಮುಖಂಡರು ಹಾಜರಿದ್ದರು.

Edited By

Ramesh

Reported By

Ramesh

Comments