ಮಗ್ಗದೂರಿನ ಕಣ್ಣಪ್ಪಗಳು...ಇವರ ಕಣ್ಣಿಗೆ ಸಾವಿಲ್ಲ....... ನೇತ್ರದಾನ... 892

16 Dec 2017 8:52 AM |
477 Report

ದೊಡ್ಡಬಳ್ಳಾಪುರದ ಟ್ಯಾಂಕ್ ರೋಡ್ ನಿವಾಸಿ, ಲೇಟ್.S.C.ಪಿಳ್ಳಪ್ಪ ನವರ ಧರ್ಮಪತ್ನಿ ಶ್ರೀಮತಿ.S.P.ಪುಟ್ಟಮ್ಮ ನವರು(88ವರ್ಷ) 15/12/2017 ರಂದು ವಿಧಿವಶರಾಗಿದ್ದಾರೆ. ಅವರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾದ, ಸ್ವಾಮಿ ವಿವೇಕಾನಂದ ಶಾಲೆಯ ಟಿ.ವಿ.ರವಿ, ಶರತ್ ಬಾಬು, ಆರ್.ಲಕ್ಷ್ಮೀನಾರಾಯಣ್ ಹಾಗೂ ಅಭಿಷೇಕ್ ನೇತ್ರಧಾಮದ ಡಾ.ದೀಪ್ತಿ ಮತ್ತು ಸಿಬ್ಬಂದಿವರ್ಗ ಮತ್ತು ಹಾಗೂ ನೇತ್ರದಾನ ಮಾಡಿದ ಕುಟುಂಬದ ಎಲ್ಲಾ ಸದಸ್ಯರಿಗೆ ಭಗವಂತನು ಒಳ್ಳೆಯದನ್ನು ಮಾಡಲಿ. ಇದು ನಮ್ಮ 892ನೇ ನೇತ್ರದಾನ.  ಎಂ.ಬಿ.ಗುರುದೇವ ಛೇರ್ಮನ್, ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ- ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ ದೊಡ್ಡಬಳ್ಳಾಪುರ.
ನೇತ್ರದಾನಕ್ಕೆ ಸಂಪರ್ಕಿಸಿ -
9742202650, 9036797177, 9902884008, 9844179963

ವರದಿ: ನಟರಾಜ್ ನಾಗದಳ

Edited By

Ramesh

Reported By

Ramesh

Comments