ಡಿಸೆಂಬರ್ 17 ರಂದು ಭಾನುವಾರ ನಾಗದಳ ಮತ್ತು ಶ್ರೀ ಮಾರುತಿ ವ್ಯಾಯಾಮಶಾಲೆಯ ಸಹಯೋಗದೊಂದಿಗೆ ಘಾಟಿಕ್ಷೇತ್ರಕ್ಕೆ 22ನೇ ವರ್ಷದ ಪಾದಯಾತ್ರೆ,

14 Dec 2017 9:49 AM |
408 Report

ಪ್ರತಿವರ್ಷದಂತೆ ಶ್ರೀ ಘಾಟಿ ಸುಬ್ರಮಣ್ಯ ಜಾತ್ರೆಗೆ ಮುಂಚಿತವಾಗಿ ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ 22ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮವನ್ನು ಡಿಸೆಂಬರ್ 17 ರಂದು ಭಾನುವಾರ ನಾಗದಳ ಮತ್ತು ಶ್ರೀ ಮಾರುತಿ ವ್ಯಾಯಾಮಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆಯವರ ಬೀದಿ ಪಾಠಶಾಲೆ ಬಳಿಯಿಂದ ಅಂದು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಪಾದಯಾತ್ರೆ ಪ್ರಾರಂಭವಾಗಲಿದೆ.

1996ರಲ್ಲಿ ಪ್ರಾರಂಭವಾದ ಈ ಪಾದಯಾತ್ರೆ ಕಾರ್ಯಕ್ರಮ ಪ್ರತಿವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷದ ಪಾದಯಾತ್ರೆ 22

ನೇವರ್ಷದ್ದಾಗಿದ್ದು ಪ್ರತಿವರ್ಷ ಪಾದಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಪಾದಯಾತ್ರೆಯ ಮೂಲ ಉದ್ದೇಶ ಜನರಿಗೆ ನಡಿಗೆಯ ಮಹತ್ವವನ್ನು
ನೆನಪಿಸುವುದಾಗಿದೆ. ಪ್ರತಿನಿತ್ಯ ವಾಹನಗಳನ್ನೇ ಸಂಚಾರಿ ಮಾಧ್ಯಮವಾಗಿ ಬಳಸುತ್ತಿರುವ ಈ ಕಾಲದಲ್ಲಿ ಮನುಷ್ಯ ಸಹಜ ನಡಿಗೆಯನ್ನೇ ಮರೆತು
ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ದೂರದ ದೇವಸ್ಥಾನಗಳಿಗೆ ನಡೆದುಕೊಂಡು ಹೋಗುವುದರ ಮೂಲಕ
ಭಕ್ತಿಯ ಜೊತೆಗೆ ಜನರು ತಮ್ಮ ಶಕ್ತಿಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಈಗ ನಡೆಯದೆ ವಾಹನಗಳಿಗೆ ದಾಸರಾಗಿ ನಾನಾ ಖಾಯಿಲೆಗಳಿಗೆ ತುತ್ತಾಗಿ ಪರಿಸರ ಮಾಲಿನ್ಯಕ್ಕೂ ಕಾರಣರಾಗಿದ್ದೇವೆ. ಈ ವಿಷಯದಲ್ಲಿ ಜಾಗೃತಿಗಾಗಿ ಈಪಾದಯಾತ್ರೆ ಆಯೋಜಿಸಲಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ:

ನಾಗದಳ ಸಂಚಾಲಕರಾದ ಸಿ.ನಟರಾಜ್ ಮೊ: 9886861288

ಸುಂಸು. ಬದರಿನಾಥ್ ಮೊ: 9242143140

Edited By

Ramesh

Reported By

Ramesh

Comments