ರಾಮನಗರ ನನ್ನ ಕರ್ಮಭೂಮಿ ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ :ಎಚ್ ಡಿಕೆ

08 Dec 2017 6:09 PM |
803 Report

ಉತ್ತರ ಕರ್ನಾಟಕ ಭಾಗದಿಂದಲೂ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ. ಆದರೆ ರಾಮನಗರ ನನ್ನ ಕರ್ಮಭೂಮಿ. ಹಾಗಾಗಿ ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು. ಉತ್ತರ ಕರ್ನಾಟಕ ಭಾಗದ ಕಾರ್ಯಕರ್ತರಿಂದ ಒತ್ತಡ ಜಾಸ್ತಿಯಾದರೆ ಚುನಾವಣಾ ಸಮಯ ಬಂದಾಗ ಒಂದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಉತ್ತರಿಸಿದರು.

ಸೂಟ್‌ಕೇಸ್ ಸಂಸ್ಕೃತಿ ಇಲ್ಲ ನಮ್ಮ ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಹಿಂದೆ ಸೂಟ್‌ಕೇಸ್ ಸಂಸ್ಕೃತಿ ನಡೆಸುವವರು ನಮ್ಮ ಪಕ್ಷದಲ್ಲಿದ್ದರು. ಆದರೆ ಈಗ ಅವರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.ಜೆಡಿಎಸ್‌ನಿಂದ ಮಧುಗಿರಿ ಕ್ಷೇತ್ರಕ್ಕೆ ಚಿತ್ರನಟ ರಂಗಾಯಣ ರಘು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದೆಯೆಲ್ಲಾ ಎಂಬ ಪ್ರಶ್ನೆಗೆ ಮಧುಗಿರಿ ಕ್ಷೇತ್ರದ ಅಭ್ಯರ್ಥಿ ವಿಚಾರ ಅಂತಿಮಗೊಂಡಿದೆ. ಮಧುಗಿರಿ ಕ್ಷೇತ್ರಕ್ಕೆ ವೀರಭದ್ರಯ್ಯನವರೇ ಅಭ್ಯರ್ಥಿ ಎಂದರು. 

Edited By

hdk fans

Reported By

hdk fans

Comments