ನಗರಸಭಾ ಸದಸ್ಯ ಕೆ.ಜಿ. ರಘುರಾಮ್ [ತಿಮ್ಮಣ್ಣ] ಇನ್ನಿಲ್ಲ

28 Nov 2017 7:54 PM |
608 Report

ದೊಡ್ಡಬಳ್ಳಾಪುರದ ಚಿಕ್ಕಪೇಟೆಯಲ್ಲಿ ವಾಸವಾಗಿದ್ದ ಕೊಂಡಲಾಪುರ ಗೋಪಾಲಕೃಷ್ಣ ರಘುರಾಮ್ ತೀವ್ರ ಹೃದಯಾಘಾತದಿಂದ ಇಂದು ಬೆಳಿಗ್ಗೆ ೯-೪೫ ಕ್ಕೆ ನಿಧನರಾದರು. ಮೃತರ ನಿಧನದಿಂದಾಗಿ ಪತ್ನಿ, ಮಗ ಮತ್ತು ಮಗಳು ಹಾಗೂ ಅಪಾರ ಬಂದುಮಿತ್ರರು ದುಖಃತಪ್ತರಾಗಿದ್ದಾರೆ. ಮೃತರು ನಗರದ ೨೨ರಡನೇ ವಾರ್ಡ್ ದೇವಾಂಗಪೇಟೆಯ ನಗರಸಭಾ ಸದಸ್ಯರಾಗಿದ್ದರು. ಕೆ.ಗೋಪಾಲಕೃಷ್ಣ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದ ರಘುರಾಮ್ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದವನ್ನು ಅಗಲಿದ್ದಾರೆ. ರಘುರಾಮ್ ರವರು ನಗರದ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ನಲ್ಲಿ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರ ಆತ್ಮಕ್ಕೆ ಟ್ರಸ್ಟ್ ನ ಅಧ್ಯಕ್ಷರಾದ ಪಿ.ಸಿ. ಲಕ್ಷ್ಮಿನಾರಾಯಣ್ ರವರು, ವಾಣಿಜ್ಯೋದ್ಯಮಿ ಹೆಚ್.ಪಿ.ಶಂಕರ್ ದೇವಾಂಗ ಮಂಡಲಿ ಅಧ್ಯಕ್ಷರಾದ ತಿಮ್ಮಶೆಟ್ಟಪ್ಪ ಮುಂತಾದ ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Edited By

Joy Bose

Reported By

hdk fans

Comments