ನೇಕಾರ ಗುಂಪು ವಿಮಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನ ವಿಳಂಬ, ನೇಕಾರರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ

28 Nov 2017 9:57 AM |
388 Report

ನೇಕಾರ ಗುಂಪು ವಿಮಾ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿಳಂಬ ಮತ್ತು ಜವಳಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರುದ್ಧ ಹೋರಾಟದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ H D ಕುಮಾರಸ್ವಾಮಿ ಅವರು ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ M ವೀರಪ್ಪ ಮೊಯಿಲಿ ಅವರು ಮತ್ತು ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೊ. ತಿಪ್ಪೇಶ್ ರವರಿಗೆ ಮನವಿ ಸಲ್ಲಿಸಲಾಯಿತು. ನೇಕಾರರ ಹೋರಾಟ ಸಮಿತಿ ಮತ್ತು ಜಿಲ್ಲಾ ನೇಕಾರ ಸಹಕಾರ ಸಂಘಗಳ ಒಕ್ಕೂಟ ಇವರ ವತಿಯಿಂದ ಪ್ರತಿಭಟನೆಯನ್ನು ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಕೆಯ ಮುಂದೆ ಹಮ್ಮಿಕೊಳ್ಳಲಾಗಿತ್ತು, ನೇಕಾರರ ಮುಖಂಡರಾದ Y V ರಾಜು ಹಾಗೂ ಪಿ.ಸಿ.ವೆಂಕಟೇಶ್, ಹೇಮಂತರಾಜು, ಕೆ.ಜಿ.ಗೋಪಾಲ್, ರಾಘು ನೇಕಾರ ಹೋರಾಟ ಸಮಿತಿ ಸದಸ್ಯರು ಭಾಗವಹಿಸಿದ್ದರು

Edited By

Ramesh

Reported By

Ramesh

Comments