ಮಗ್ಗದೂರಿನ ಕಣ್ಣಪ್ಪಗಳು.... ಇವರ ಕಣ್ಣಿಗೆ ಸಾವಿಲ್ಲ-೮೬೦

27 Nov 2017 8:35 AM |
426 Report

ದೊಡ್ಡಬಳ್ಳಾಪುರ: ಇಲ್ಲಿನ ಟ್ಯಾಂಕ್ ರಸ್ತೆ ನಿವಾಸಿಯಾಗಿದ್ದ ಬಿ.ವಿ. ಶಿವಾನಂದ (೬೮) ರವರು ನಿಧನರಾಗಿದ್ದು ಇವರ ಕಣ್ಣುಗಳನ್ನು ದೊಡ್ಡಬಳ್ಳಾಪುರದ ಡಾ. ರಾಜ್ ಕುಮಾರ್ ನೇತ್ರಸಂಗ್ರಹಣಾ ಕೇಂದ್ರದ ಮೂಲಕ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಅವರ ಬಂಧು ಮಿತ್ರರು ದಾನ ನೀಡಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಇವರ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿವೆ.

ಇದುವರೆವಿಗೂ ಊರಿನಲ್ಲಿ ಸಂಗ್ರಹಿಸಿದ ಕಣ್ಣುಗಳ ಸಂಖ್ಯೆ 860 ಮುಟ್ಟಿದೆ.

ವರದಿ:- ನಟರಾಜ್ ನಾಗದಳ

Edited By

Ramesh

Reported By

Ramesh

Comments