ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘ [ರಿ.] ಇವರಿಂದ ರಜತ ಮಹೋತ್ಸವದ ಅಂಗವಾಗಿ ೩ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

23 Nov 2017 9:29 AM |
512 Report

ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘ [ರಿ.] ಇವರಿಂದ ರಜತ ಮಹೋತ್ಸವದ ಅಂಗವಾಗಿ ೩ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ವೃತ್ತಿನಿರತ, ಮತ್ತು ಹವ್ಯಾಸಿ ಛಾಯಾಗ್ರಾಹಕರಿಗೆ ಆಯೋಜಿಸಲಾಗಿದೆ. ಸ್ಪರ್ಧೆಯನ್ನು ವೈಲ್ಡ್ ಲೈಫ್, ಪಿಕ್ಟೋರಿಯಲ್, ವೆಡ್ಡಿಂಗ್, ಬೇಬಿ ಫೋಟೋಸ್ ಮತ್ತು ನಮ್ಮ ಕರ್ನಾಟಕ ಎಂದು ವಿಭಾಗಿಸಲಾಗಿದೆ. ಪ್ರತೀ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾದಾನ ಬಹುಮಾನ ಇರುತ್ತದೆ. ಚಿತ್ರಗಳನ್ನು ಕಳುಹಿಸಲು ಅಂತಿಮ ದಿನಾಂಕ ಡಿ.೧೩ ಚಿತ್ರಗಳ ಪರಿಶೀಲನೆ ಮತ್ತು ತೀರ್ಮಾನ ಡಿ.೧೭. ಪಲಿತಾಂಶ ಡಿ. ೨೧. ಪ್ರದರ್ಶನ ಡಿ.೨೬ ಮತ್ತು ೨೭. ಛಾಯಾಚಿತ್ರಗಳನ್ನು ಕಳುಹಿಸುವ ವಿಳಾಸ: ಬಿ.ಎನ್. ಉಮಾಶಂಕರ್ ನಿರ್ದೇಶಕರು, ಕೆ.ಪಿ.ಎ ನಂ. ೫೮೯, ಟ್ಯಾಂಕ್ ರಸ್ತೆ, ದೊಡ್ಡಬಳ್ಳಾಪುರ-೫೬೧೨೦೩. ಮೊ.೯೯೮೬೦೨೯೫೮೦, ಹೆಚ್ಚಿನ ಮಾಹಿತಿಗೆ: ಛಾಯಾ ಸ್ಪರ್ಧೆಯ ಛೇರ್ಮನ್ -ಕೆ. ಸಂಪತ್ ಕುಮಾರ್ ೯೪೪೯೬೩೮೩೭೪ ಅಧ್ಯಕ್ಷರು, ಡಿ.ಪಿ.ಎ.- ಬಿ.ಎನ್. ರವಿಕುಮಾರ್ ೯೮೪೫೨೪೨೬೨೩

Edited By

Ramesh

Reported By

Ramesh

Comments