ಉತ್ತರ ಕರ್ನಾಟಕ ಹಿಂದುಳಿಯಲು ಬಿಜೆಪಿ ಕಾರಣ - ಎಚ್ ವಿಶ್ವನಾಥ್

31 Aug 2017 3:35 PM |
937 Report

ಯಾದಗಿರಿಯಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ವಿಶ್ವನಾಥ್  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಉತ್ತರ ಕರ್ನಾಟಕ ಹಿಂದುಳಿಯಲು ದೇವೇಗೌಡ ಕಾರಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಹೆಚ್.ಡಿ.ದೇವೇಗೌಡ ಉತ್ತರ-ದಕ್ಷಿಣ ಮಾಡಿಲ್ಲ. ಉತ್ತರ ಕರ್ನಾಟಕದ ರೈತರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಕೃಷ್ಣಾ ಕೊಳ್ಳದ ನೀರಾವರಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ.  ಉತ್ತರ ಕರ್ನಾಟಕ ಹಿಂದುಳಿಯಲು ಬಿಜೆಪಿ ಕಾರಣ ಎಂದ ಅವರು ಮಹಾದಾಯಿ ವಿಚಾರದಲ್ಲಿ ಬಿಜೆಪಿ ಮೌನವಾಗಿದ್ದೇಕೆ ? ಐಐಟಿಯನ್ನು ರಾಯಚೂರಿನಿಂದ ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದು ಯಾರು? ಮನ್ ಕೀ ಬಾತ್ ನಲ್ಲೇಕೆ ಮಹದಾಯಿ ವಿಚಾರ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದರು.

Edited By

jds admin

Reported By

jds admin

Comments