ಇಂದಿನಿಂದ ಅಪ್ಪಾಜಿ ಕ್ಯಾಂಟೀನ್ ಲೋಕಾರ್ಪಣೆ , 5 ರೂ. ಗೆ ತಿಂಡಿ, 10 ರೂ.ಗೆ ಮುದ್ದೆ ಊಟ, 3 ರೂ. ಗೆ ಕಾಫಿ!

02 Aug 2017 11:00 AM |
1170 Report

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಇಂದಿರಾ ಕ್ಯಾಂಟೀನ್ಗೆ ಸೆಡ್ಡು ಹೊಡೆಯಲು ಇದೀಗ ಜೆಡಿಎಸ್ ಮುಖಂಡ ಶಾಸಕ ಟಿ ಎ ಶರವಣ ಅಪ್ಪಾಜಿ ಕ್ಯಾಂಟೀನ್ಆರಂಭಿಸಿದ್ದಾರೆ.

ಶರವಣ ನಿರ್ಮಿಸಿರುವ ಅಪ್ಪಾಜಿ ಕ್ಯಾಂಟಿನ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. 10 ರೂಪಾಯಿಗೆ ಮುದ್ದೆ ಊಟ ಅನ್ನ ಸಾಂಬಾರ್, 5 ರೂಪಾಯಿಗೆ ಇಡ್ಲಿ ಕೇಸರಿಬಾತ್ ನೀಡುವ 'ದೇವೇಗೌಡ ನಮ್ಮ ಅಪ್ಪಾಜಿ ಕ್ಯಾಂಟೀನ್' ಇಂದು ಉದ್ಘಾಟನೆಗೊಳ್ಳಲಿದೆ

ಶ್ರೀ ಸಾಯಿ ಸಮರ್ಪಣ ಚಾರಿಟೇಬಲ್ ನಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಪ್ರಾರಂಭದಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ಕ್ಯಾಂಟೀನ್ ಆರಂಭವಾಗುತ್ತಿದೆ.  ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ಅಪ್ಪಾಜಿ ಕ್ಯಾಂಟಿನ್ ಲೋಕಾರ್ಪಣೆಗೊಳ್ಳಲಿದೆ.

ಅಪ್ಪಾಜಿ ಕ್ಯಾಂಟೀನ್‌'ನಲ್ಲಿ 5 ರೂ.ಗೆ ತಟ್ಟೆ ಇಡ್ಲಿ-ವಡೆ, ಖಾರಾಬಾತ್‌, ಕೇಸರಿಬಾತ್‌, 10 ರೂ.ಗೆ ಪೊಂಗಲ್‌, ಮುದ್ದೆ ಬಸ್ಸಾರು, ಅನ್ನ ಸಾಂಬಾರ್,ರೈಸ್‌ ಬಾತ್‌,3 ರೂ.ಗೆ ಕಾಫಿ-ಟೀ ನೀಡಲಾಗುವುದು.ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30ರ ತನಕ ಕ್ಯಾಂಟೀನ್ ಓಪನ್ ಇರಲಿದೆ.

10 ಲಕ್ಷ ವೆಚ್ಚದಲ್ಲಿ ಕ್ಯಾಂಟೀನ್ ನಿರ್ಮಾಣ ಆಗಿದ್ದು, ಆರಂಭದಲ್ಲಿ ಸಾವಿರ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. 

Edited By

jds admin

Reported By

jds admin

Comments