ಜಮೀರ್ ವಿರುದ್ಧ ತೊಡೆತಟ್ಟಿ ನಿಂತ್ರ ಎಚ್ಡಿ ದೇವೇಗೌಡರು …!

29 Jul 2017 12:03 PM |
6164 Report

ಬೆಂಗಳೂರು: ದೇವೇಗೌಡರ ವಿರುದ್ಧ ಜಮೀರ್​ ಅಹಮದ್​ ಹಾಕಿದ್ದ ಸವಾಲನ್ನು ಗಂಭೀರವಾಗಿ ಪರಗಣಿಸಿರುವ ದೇವೇಗೌಡರು ಚಾಮರಾಜಪೇಟೆಯನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಂತಿದೆ.

ಇತ್ತೀಚೆಗೆ ಜೆಡಿಎಸ್​ ಸಮಾವೇಶ ಮಾಡಿದ್ದಕ್ಕೆ ವ್ಯಂಗ್ಯವಾಡಿದ್ದ ಜಮೀರ್​ ಅಹಮದ್​ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್​ ಠೇವಣಿ ಉಳಿಸಿಕೊಂಡರೆ ತನ್ನ ತಲೆ ಕತ್ತರಿಸಿ ಕೊಡುವುದಾಗಿ ಮಾಧ್ಯಮದಮುಂದೆ ಜೆಡಿಎಸ್​ಗೆ ಸವಾಲು ಹಾಕಿದ್ದರು.

ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ದೇವೇಗೌಡರು ಇಂದು ಮತ್ತೊಂದು ಸಮಾವೇಶವನ್ನು ಚಾಮರಾಜ ಪೇಟೆಯಲ್ಲಿ ಮಾಡುತಿದ್ದು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಸಮಾವೇಶವಾಗಿದೆ.

ಜಮೀರ್​ ಅಹಮದ್​ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ದೇವೇಗೌಡರು ಈ ಕ್ಷೇತ್ರದಲ್ಲಿ ಶತಾಯ ಗತಾಯ ಜೆಡಿಎಸ್​ಅನ್ನು ಗೆಲ್ಲಿಸಿ ಬಂಡಾಯ ಶಾಸಕರಿಗೆ ತಕ್ಕ ಉತ್ತರ ನೀಡಬೇಕೆಂದು ನಿರ್ಧರಿಸದಂತಿದೆ.

Edited By

jds admin

Reported By

jds admin

Comments