ಇಂಧನ ಇಲಾಖೆಯ ಹಲವು ಮಹತ್ವಪೂರ್ಣ ಯೋಜನೆಗಳ ಘೋಷಣೆ: ಡಿ.ಕೆ.ಶಿ.

06 Jul 2017 3:40 PM |
1269 Report

• ರಾಜ್ಯದ ಐದು ಎಸ್ಕಾಂ ವ್ಯಾಪ್ತಿಯ ಆಯ್ದ 17 ಉಪ ವಿಭಾಗಗಳನ್ನು ಒಟ್ಟು 3,675 ಕೋಟಿ ರೂ. ವೆಚ್ಚದಲ್ಲಿ ಮಾದರಿ ಉಪವಿಭಾಗ ಯೋಜನೆಯಡಿ ಅಭಿವೃದ್ಧಿ ಹಾಗೂ ಪ್ರತಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳನ್ನಾಗಿ ಪರಿವರ್ತನೆ.

  • ದೇಶದಲ್ಲೇ ಮೊದಲಬಾರಿಗೆ ಮೈಸೂರಿನಲ್ಲಿ ನಡೆಸಿದ ಪ್ರಾಯೋಗಿಕ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಸ್ಮಾರ್ಟ್‌ ಮೀಟರ್‌ಗಳನ್ನು ಬೆಂಗಳೂರು ನಗರದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅದರಂತೆ ನಗರಕ್ಕೆ ಐದು ಲಕ್ಷ ಸ್ಮಾರ್ಟ್‌ ಮೀಟರ್‌ಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು.
  • ನಿರಂತರ ಗುಣಮಟ್ಟದ ವಿದ್ಯುತ್‌ ಪೂರೈಕೆ, ತಾಂತ್ರಿಕ ಹಾಗೂ ವಾಣಿಜ್ಯ ವಿದ್ಯುತ್‌ ಸೋರಿಕೆ ಪ್ರಮಾಣ ಶೇ.6ಕ್ಕೆ ಇಳಿಕೆ.
  • ರಾಜ್ಯದಲ್ಲಿ ವಿದ್ಯುತ್‌ ಅವಘಡದ ವೇಳೆ ಮೃತಪಡುವ ಹಸು, ಎತ್ತು, ಕುರಿ, ಮೇಕೆಯಂತಹ ಜಾನುವಾರುಗಳು ಮೃತಪಟ್ಟರೆ ಪಶುಸಂಗೋಪನ ಇಲಾಖೆ ವರದಿ ಆಧರಿಸಿ 50,000 ರೂ. ವರೆಗೆ ಪರಿಹಾರ.
  • ಮಳೆಗಾಲದಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಕೆಡುವುದು ಹೆಚ್ಚುವ ಹಿನ್ನೆಲೆಯಲ್ಲಿ ಹಾಗೂ ಕೊರತೆ ತಪ್ಪಿಸಲು 50 ಸಾವಿರ ಟಿಸಿ ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ.
  • ಪ್ರತಿ ತಾಲೂಕಿನಲ್ಲಿ ಕನಿಷ್ಟ 100 ಟಿಸಿಗಳನ್ನು ದಾಸ್ತಾನು.
  • ನಗರದ ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಪಾದಚಾರಿಗಳಿಗೆ ತೊಂದರೆಯಾಗದಂತೆ ವಿಶೇಷ ವಿನ್ಯಾಸದಲ್ಲಿ ಸ್ಥಳಾಂತರಿಸಲು ಆದ್ಯತೆ ನೀಡಲಾಗುತ್ತಿದೆ.
  • ಬೆಸ್ಕಾಂ ವ್ಯಾಪ್ತಿಯಲ್ಲಿ 4,385 ಟ್ರಾನ್ಸ್‌ಫರ್ಮರ್‌ಗಳನ್ನು ಸ್ಥಳಾಂತರಕ್ಕೆ ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿವೆ. ಅದರಲ್ಲಿ 3,919 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರಕ್ಕೆ ಈಗಾಗಲೇ ಕ್ರಮ ವಹಿಸ ಲಾಗಿದೆ.

Edited By

dks fans

Reported By

dks fans

Comments