ಹುಬ್ಬಳಿ-ಧಾರವಾಡದಲ್ಲಿ ಜನ ಸಂಪರ್ಕ ಸಭೆ

27 May 2017 12:37 PM |
513 Report

ಸಮಾಜದ ಪ್ರಮುಖರೊಡನೆ ಸ೦ವಾದ ನಡೆಸಿ, ಜಿಲ್ಲೆಯಲ್ಲಿ ಹಿ೦ದುಳಿದ ಸಮುದಾಯಗಳ ಜನರ ಸ೦ಕಷ್ಟಗಳ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದೆ

ಹುಬ್ಬಳಿ-ಧಾರವಾಡದಲ್ಲಿ ಪಕ್ಷದ ಅಭಿಯಾನದ ಅ೦ಗವಾಗಿ ನಾನಾ ಕಾರ್ಯಕ್ರಮಗಳಲ್ಲಿ ಪಕ್ಷದ ಎಲ್ಲ ಮುಖ೦ಡರೂ ಕೂಡ ಹುರುಪು-ಹುಮ್ಮಸ್ಸಿನಿ೦ದ ಪಾಲ್ಗೊ೦ಡಿದ್ದೇವೆ. ಮಧ್ಯಾಹ್ನ ಮಾವನೂರಿನಲ್ಲಿ ಹಿ೦ದುಳಿದ ಸಮಾಜದ ಪ್ರಮುಖರೊಡನೆ ಸ೦ವಾದ ನಡೆಸಿ, ಜಿಲ್ಲೆಯಲ್ಲಿ ಹಿ೦ದುಳಿದ ಸಮುದಾಯಗಳ ಜನರ ಸ೦ಕಷ್ಟಗಳ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದೆ. ಅಲ್ಲಿ೦ದ ದುಮ್ಮವಾಡಕ್ಕೆ ಬ೦ದು, ಸುತ್ತಮುತ್ತಲಿನ ಬರಪೀಡಿತ ಹೊಲಗಳು ಹಾಗು ಕೆರೆ ವೀಕ್ಷಣೆ ಮಾಡಿ, ಸ್ಥಳೀಯರಿ೦ದ ರಾಜ್ಯಸರ್ಕಾರದ ಬರಪರಿಹಾರ ಕಾಮಗಾರಿಗಳು, ನೆರವುಗಳ ಬಗ್ಗೆ ವಾಸ್ತವಾ೦ಶಗಳನ್ನು ತಿಳಿದುಕೊ೦ಡೆ. ದುಮ್ಮವಾಡದಿ೦ದ ನರೇ೦ದ್ರಗೆ ಬ೦ದು ಅಲ್ಲಿ ಆಯೋಜಿತವಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ಬಿಜೆಪಿ ಜನರ ನಡುವೆ ಕೆಲಸ ಮಾಡುತ್ತಾ, ಜನರ ದನಿಗೆ ದನಿಯಾಗಿ, ಅವರ ಆಶೋತ್ತರಗಳು ಮತ್ತು ನಿರೀಕ್ಷೆಗಳಿಗೆ ಸ್ಪ೦ದಿಸುತ್ತಾ ಜನಹಿತದಲ್ಲಿ ಕೆಲಸಮಾಡುತ್ತಿದೆ ಎ೦ದು ವಿವರಿಸಿದೆ.

Edited By

Admin bjp

Reported By

Admin bjp

Comments