ಬಿಜೆಪಿಯ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ. ರೇವಣ್ಣ..!

20 Aug 2019 1:38 PM | Politics
3653 Report

ದೋಸ್ತಿ ಸರ್ಕಾರ ಪತನವಾಗಲು ಮುಖ್ಯ ಕಾರಣ ಎಂದರೆ ಅತೃಪ್ತ ಶಾಸಕರು..ಅತೃಪ್ತ  ಶಾಸಕರು ಸದ್ಯ ಅನರ್ಹರಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ.. ಅತೃಪ್ತ ಶಾಸಕರು ರಾಜೀನಾಮೆ ನೀಡಲು ಬಿಜೆಪಿಯ ಆಪರೇಷನ್ ಕಮಲ ಕೂಡ ಕಾರಣವಾಗಿದೆ.. ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಭಾರೀ ಸದ್ದು ಮಾಡಿದ್ದ ಆಪರೇಷನ್ ಕಮಲದ ಕುರಿತಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ, ಆಪರೇಷನ್ ಕಮಲದ ತನಿಖೆ ಮಾಡಬೇಡಿ ಎಂದು ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದರು. ಹೀಗಾಗಿ ನಾವು ಆಪರೇಷನ್ ಕಮಲದ ತನಿಖೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ… ಅದಷ್ಟೆ ಅಲ್ಲದೆ  ಫೋನ್ ಕದ್ದಾಲಿಕೆಯ ಪ್ರಕರಣದಲ್ಲಿ ಸಿಬಿಐ ತನಿಖೆ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಯಾವುದೇ ತನಿಖೆಗೂ ನಾವು ತಲೆಕೆಡಿಸಿಕೊಳ್ಳಲ್ಲ. ಆಪರೇಷನ್ ಕಮಲ ವಿಚಾರ ಕುರಿತಂತೆ ಬಸವರಾಜ್ ಬೊಮ್ಮಾಯಿ ಸೇರಿ ಮೂರ್ನಾಲ್ಕು ಜನ ತನಿಖೆ ಮಾಡಬೇಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ನಾವು ಅದರ ತನಿಖೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ.. ಒಟ್ಟಾರೆಯಾಗಿ ರಾಜಕೀಯ ವಲಯದಲ್ಲಿ ಇನ್ನೂ ಆಪರೇಷನ್ ಕಮಲ ನಡೆಯುತ್ತಲೇ ಇದೆ ಎಂದು ವಿರೋಧ ಪಕ್ಷಗಳು ಹೇಳುತ್ತಲೆ ಇವೆ..

Edited By

Manjula M

Reported By

Manjula M

Comments