ಅಂಬರೀಶ್’ಗೆ ಆಪ್ತರಾಗಿದ್ದ ಇವರು ಸುಮಲತಾ ವಿರುದ್ಧ ಗರಂ ಆಗಿದ್ದೇಕೆ..?

30 Mar 2019 4:58 PM | Politics
3798 Report

ರೆಬಲ್ ಸ್ಟಾರ್ ಅಂಬರೀಶ್ ನಿಧನದ ನಂತರ ರಾಜಕೀಯ ವಲಯದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.. ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ ತಕ್ಷಣ ಸಾಕಷ್ಟು ರೀತಿಯ ಚರ್ಚೆಗಳು ಆದವು.. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಸುಮಲತಾ ಅವರಿಗೆ ದೋಸ್ತಿ ಟಿಕೇಟ್ ನಿರಾಕರಿಸಿತ್ತು.. ಆದರೆ ಸುಮಲತಾ ಅಷ್ಟೆಕ್ಕೆ ಸುಮ್ಮನಿರದೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದರು.. ಇದರಿಂದ ದೋಸ್ತಿಗಳ ಕೆಂಗಣ್ಣಿಗೆ ಸುಮಲತಾ ಗುರಿಯಾದರು.. ಇದೀಗ ಮತ್ತೊಬ್ಬರು ಸುಮಲತಾ ವಿರುದ್ದ ಗರಂ ಆಗಿದ್ದಾರೆ.

ಹಿರಿಯ ನಟ ಅಂಬರೀಶ್ ಅವರು ಬದುಕಿದ್ದಾಗ ಅವರ ಅತ್ಯಾಪ್ತರಾಗಿದ್ದ ಅಮರಾವತಿ ಚಂದ್ರಶೇಖರ್ ಇದೀಗ ಸುಮಲತಾ ವಿರುದ್ಧ ತೊಡೆತಟ್ಟಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಅಮರಾವತಿ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್‍ನವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶ್ ಮಂಡ್ಯಕ್ಕೆ ಹೋದಾಗಲೆಲ್ಲಾ ಅಮರಾವತಿ ಚಂದ್ರಶೇಖರ್ ಮನೆಯಲ್ಲೇ ಇರುತ್ತಿದ್ದರಂತೆ. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ ಎಂದು ಕೋಪಗೊಂಡಿರುವ ಅಮರಾವತಿ ಚಂದ್ರಶೇಖರ್ ಇದೀಗ ಸುಮಲತಾ ವಿರುದ್ದ ತಿರುಗಿ ಬಿದ್ದಿದ್ದಾರೆ.

Edited By

Manjula M

Reported By

Manjula M

Comments