ದೋಸ್ತಿ ಸರ್ಕಾರದ ಐವರು ಶಾಸಕರಿಂದ ರಾಜೀನಾಮೆ..? ಯಾರ್ಯಾರು ಗೊತ್ತಾ..?

07 Feb 2019 9:33 AM | Politics
5598 Report

ಮುಂಬರುವ ಲೋಕಸಭಾ ಚುನಾವಣಗೆ ಈಗಾಗಲೇ ಎಲ್ಲಾ ಪಕ್ಷದವರು ತಯಾರಿಯನ್ನು ನಡೆಸುತ್ತಿದ್ದಾರೆ… ಈಗಿರುವಾಗಲೇ ಶಾಸಕರ ರಾಜೀರಾಮೆ ಎಂಬ ಮಾತು ಕೇಳಿ ಬರುತ್ತಿದೆ.. ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ.. ಬುಧ​ವಾರ ನಡೆದ ವಿಧಾ​ನ​ಮಂಡ​ಲದ ಜಂಟಿ ಅಧಿ​ವೇ​ಶ​ನ​ಕ್ಕೆ ಕಾಂಗ್ರೆ​ಸ್‌-ಜೆಡಿ​ಎ​ಸ್‌ನ 11 ಮಂದಿ ಶಾಸ​ಕರು ಗೈರು ಹಾಜ​ರಾ​ಗುವ ಮೂಲಕ ಆತಂಕ ಸೃಷ್ಟಿಸಿದೆ.. ಈ ಹಿನ್ನಲೆಯಲ್ಲಿ  ಮುಂದಿನ ಹಂತ​ದಲ್ಲಿ ಅತೃಪ್ತ ಶಾಸ​ಕರ ಪೈಕಿ ಐವರು ಗುರು​ವಾರ ರಾಜೀ​ನಾಮೆ ನೀಡುವ ಸಾಧ್ಯ​ತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಬಿಜೆ​ಪಿಯು ತನ್ನ ಕಾರ್ಯ​ತಂತ್ರ​ದಂತೆ ಯಶ​ಸ್ವಿ​ಯಾಗಿ ರಾಜ್ಯ​ಪಾ​ಲರ ಭಾಷ​ಣಕ್ಕೆ ಅಡ್ಡಿ​ಪಡಿ​ಸಿತು. ಜಂಟಿ ಸದ​ನ ಸಮಾ​ವೇ​ಶ​ಗೊಂಡ 5 ನಿಮಿ​ಷಕ್ಕೆ ಮುಕ್ತಾ​ಯ​ಗೊಂಡಿತು. ರಾಜ್ಯ​ಪಾ​ಲರು ಸದ​ನ​ವನ್ನು ಉದ್ದೇ​ಶಿಸಿ ಮಾತ​ನಾ​ಡಲು ತಂದಿದ್ದ 22 ಪುಟ​ಗಳ ಭಾಷ​ಣದ ಪೈಕಿ ಎರಡು ಪುಟ​ಗ​ಳನ್ನು ಸಮ​ರ್ಪ​ಕ​ವಾಗಿ ಓದಲು ಸಾಧ್ಯ​ವಾ​ಗ​ದಂತೆ ಸದ​ನ​ದಲ್ಲಿ ಕೋಲಾ​ಹ​ಲ​ಕಾರಿ ಸನ್ನಿ​ವೇ​ಶ​ವನ್ನು ಬಿಜೆಪಿ ಸೃಷ್ಟಿ​ಸಿತು., ಬಿಜೆ​ಪಿ​ಯತ್ತ ವಾಲಿ​ರುವ ಕಾಂಗ್ರೆ​ಸ್‌ನ ನಾಲ್ಕು ಮಂದಿ ಅತೃಪ್ತ ಶಾಸ​ಕರಾದ ಗೋಕಾಕ್‌ನ ರಮೇಶ್‌ ಜಾರಕಿಹೊಳಿ, ಅಥಣಿಯ ಮಹೇಶ್‌ ಕುಮಟಳ್ಳಿ, ಬಳ್ಳಾರಿ ಗ್ರಾಮೀಣದ ಬಿ.ನಾಗೇಂದ್ರ ಮತ್ತು ಚಿಂಚೋ​ಳಿಯ ಡಾ ಉಮೇಶ್‌ ಜಾಧವ್‌ ಅವರು ಸದನಕ್ಕೆ ಗೈರು ಹಾಜರಾಗಿದ್ದು ಸರ್ಕಾರಕ್ಕೆ ಇಕ್ಕಟ್ಟಿನ ಸ್ಥಿತಿ ತಂದೊಡ್ಡಿತು.ಒಟ್ಟಾರೆ ಸದನಕ್ಕೆ ಹಾಜರಾಗದೇ ಕೆಲವು  ಶಾಸಕರು ದೋಸ್ತಿ ಸರ್ಕಾರಕ್ಕೆ ಬೆಂಬಲ ನೀಡದೆ ಅದನ್ನು ಉರುಳಿಸಲು ಬಿಜೆಪಿಯಯವರ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments