ಭಾಷಣ ಸಾಕು ಅಂತ ಚೀಟಿ ಬರೆದು ಕಳಿಸಿದ ದಿನೇಶ್ ಗುಂಡೂರಾವ್..! ಯಾರಿಗೆ ಗೊತ್ತಾ..?

18 Jan 2019 5:13 PM | Politics
1192 Report

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಎಚ್​.ಕೆ.ಪಾಟೀಲ್​ ಅವರನ್ನು ನೇಮಕ ಮಾಡಲಾಗಿದೆ. ಇದರ ಅಂಗವಾಗಿ  ಅರಮನೆಯ ಮೈದಾನದಲ್ಲಿ  ಎಚ್​.ಕೆ.ಪಾಟೀಲ್​ ಅಧಿಕಾರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ ಪರಮೇಶ್ವ‍ರ್ ಅವರು ಮಾತನಾಡುತ್ತಿದ್ದ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಅವರು ಭಾಷಣ ಸಾಕು ಅಂತ ಚೀಟಿಯನ್ನು ಬರೆದುಕೊಟ್ಟರು ಎಂದು ಹೇಳಲಾಗುತ್ತಿದೆ.

ಈ ಸಮಯದಲ್ಲಿ ಚೀಟಿಯನ್ನು ನೋಡದೆ ನನಗ್ಯಾಕಪ್ಪ ಚೀಟಿ ಕೊಡ್ತೀರ ಎಂದು ಪರಮೇಶ್ವರ್ ಅವರು ಚೀಟಿಯನ್ನ ನೋಡದೆ ಕೆಳಗೆ ಎಸೆದರು. ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್ ನಮ್ಮ ಶಾಸಕರಿಗೆ ಹಣ,ಅಧಿಕಾರದ ಆಸೆ ತೋರಿಸ್ತಿದ್ದಾರೆ.ಆಪರೇಷನ್ ಕಮಲ 2 ಮಾಡೋಕೆ ಹೊರಟಿದ್ದಾರೆ ಅಂತ ಆರೋಪವನ್ನು ಮಾಡಿದರು... ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಶೇಮ್, ಇಂತ ಕೀಳುಮಟ್ಟದ ರಾಜಕಾರಣ ಸರಿಯಲ್ಲ, ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಪರಮೇಶ್ವರ್ ವಿರೋಧ ಪಕ್ಷದವರ ವಿರುದ್ದ ಕಿಡಿಕಾರಿದರು.

Edited By

Manjula M

Reported By

Manjula M

Comments