ಅಂಬರೀಷ್ ಆಪ್ತರಿಗೆ ಕಾಂಗ್ರೆಸ್‌ನಲ್ಲಿ ಕೊಕ್..! ಸ್ವಪಕ್ಷದಲ್ಲಿಯೇ ಅಸಮಾಧಾನ

13 Nov 2018 3:03 PM | Politics
1488 Report

ಕಾಂಗ್ರೆಸ್‌ನಿಂದ ಮಾಜಿ ಸಚಿವ ಅಂಬರೀಶ್  ಭಾಗಿಯಾಗದ ಹಿನ್ನಲ್ಲೆಯಲ್ಲಿಯೇ ಅಂಬರೀಷ್ ಆಪ್ತರ ಬದಲಾವಣೆಗೆ ಕೆಪಿಸಿಸಿ ಇದೀಗ ಮುಂದಾಗಿದೆ. ಶ್ರೀರಂಗಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂಬಿ ಆಪ್ತ ಲಿಂಗರಾಜು ಅವರನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.. ಇದೀಗ ಅವರ  ಸ್ಥಾನಕ್ಕೆ ನಗುವನಹಳ್ಳಿ ಪ್ರಕಾಶ್ ಅವರನ್ನು ನೇಮಿಸಲಾಗಿದೆ.

ಶ್ರೀರಂಗಪಟ್ಟಣ ಬ್ಲಾಕ್ ನ ಕಾಂಗ್ರೆಸ್ ಅಧ್ಯಕ್ಷನಾಗಿ ಪ್ರಕಾಶ್ ಅವರನ್ನು ನೇಮಿಸಿರುವುದಾಗಿ ಕೆಪಿಸಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಈ ನಿರ್ಧಾರಕ್ಕೆ ಅಂಬಿ ಆಪ್ತರು ಹಾಗೂ ಶ್ರೀರಂಗಪಟ್ಟಣ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By

Manjula M

Reported By

Manjula M

Comments