ರಾಮನಗರ ವಿಧಾನಸಭೆ ಉಪಚುನಾವಣೆ : ಮತ ಚಲಾವಣೆ ಮಾಡದ ಅನಿತಾಕುಮಾರಸ್ವಾಮಿ..! ಕಾರಣ ಏನ್ ಗೊತ್ತಾ..?

03 Nov 2018 9:12 AM | Politics
521 Report

ಈಗಾಗಲೇ ರಾಮನಗರ ವಿಧಾನಸಭಾ ಉಪಚುನಾವಣೆ ಮತದಾನ ಪ್ರಾರಂಭವಾಗಿದೆ. ರಾಮನಗರ ವಿಧಾನಸಭೆ ಉಪಚುನಾವಣೆ ಮತದಾನ ನಡೆಯುತ್ತಿದ್ದು . ರಾಮನಗರ ಜನರು  ಉಪಚುನಾವಣೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಅನ್ನಿಸುತ್ತದೆ.. ಒಬ್ಬೊಬ್ಬರಾಗಿ ಮತಕಟ್ಟೆಗೆ ಬಂದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಮನಗರ ಉಪಚುನಾವಣೆಯ ಮತದಾನ ನಡೆಯುತ್ತಿದ್ದು, ಪ್ರಮುಖ ಅಭ್ಯರ್ಥಿಗಳಾದ ಅನಿತಾ ಕುಮಾರಸ್ವಾಮಿ ಹಾಗೂ ಎಲ್. ಚಂದ್ರೇಗೌಡ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಹಾಗಿಲ್ಲ. ಕ್ಷೇತ್ರದಲ್ಲಿ ಅವರ ಮತ ಇಲ್ಲವಾದ ಕಾರಣ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅನಿತಾ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದು, ಎಲ್ .ಚಂದ್ರಶೇಖರ್ ಚುನಾವಣೆ ಕಣದಿಂದ ನಿವೃತ್ತಿಯಾಗಿದ್ದರೂ ಕೂಡ ಅಧಿಕೃತವಾಗಿ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯ ಫಲಿತಾಂಶ ಬರುವವರೆಗೂ ಗೆಲುವಿನ ಅಭ್ಯರ್ಥಿ ಯಾರು ಕಾದು ನೋಡಲೇಬೇಕು…

Edited By

Manjula M

Reported By

Manjula M

Comments