ದೋಸ್ತಿಗಳ ವಿರುದ್ಧ ಕಣಕ್ಕೆಇಳಿಯಲು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪಿಕ್ಸ್

11 Oct 2018 11:53 AM | Politics
548 Report

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ, ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್ ಅವರು ಮಂಡ್ಯ ಲೋಕಸಭಾ ಉಪಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು, ದೋಸ್ತಿಗಳನ್ನು ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದೂ ಲೋಕಲ್ ಅಭ್ಯರ್ಥಿಯಾದ ಮಂಡ್ಯ ಜಿಲ್ಲೆ ನಾಗಮಂಗಲದವರಾದ ಅಶ್ವಥ್ ನಾರಾಯಣ್ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ, ಕಾಂಗ್ರೆಸ್'ನಲ್ಲಿ ಅಭ್ಯರ್ಥಿಯನ್ನು ಹಾಕದ ಕಾರಣ ಅಸಮಾಧಾನಗೊಂಡ ಕಾರ್ಯಕರ್ತರ ಸಹಾಯ ಪಡೆದು ಬಿಜೆಪಿ ಗೆಲ್ಲವು ಪ್ಲಾನ್ ಮಾಡಲಾಗಿದ್ದೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

venki swamy

Comments