ಹೆಚ್’ಡಿಕೆ ಪರ ಬ್ಯಾಟಿಂಗ್ ಬೀಸಿದ ಅಂಬರೀಶ್..! ಜೆಡಿಎಸ್ ಪಾಲಾಗ್ತಾರಾ ಮಂಡ್ಯದ ಗಂಡು..!!

06 Oct 2018 10:55 AM | Politics
3090 Report

ದೋಸ್ತಿ ಸರ್ಕಾರ ರಚನೆಯಾದ ದಿನದಿಮದ ಒಂದಲ್ಲ ಒಂದು ಜಗಳಗಳು, ಒಳಗೊಳಗೆ ಮುಸುಕಿನ ಗುದ್ದಾಟಗಳು ನಡೆಯುತ್ತಲೆ ಇವೆ.  ಆದರೆ ಇದರ ನಡುವೆ ಅಂಬರೀಶ್ ಒಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಕಾಂಗ್ರೆಸ್​ಗೆ ಕುಮಾರಸ್ವಾಮಿ ಅನಿವಾರ್ಯ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್​​​ ಅನಿವಾರ್ಯವಲ್ಲ ಎಂದು ಹೇಳುವ ಮೂಲಕ ದೋಸ್ತಿ ಸರ್ಕಾರದಲ್ಲಿ ಯಾರಿಗೆ ಯಾರು ಅನಿವಾರ್ಯ ಎಂದು ಮಾಜಿ ಸಚಿವ ಅಂಬರೀಶ್​​​ ಕಾಂಗ್ರೆಸ್​ ನಾಯಕರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ಮಾತನಾಡಿದ ಅಂಬರೀಶ್ ಅವರು, ಜೆಡಿಎಸ್​ಗೆ ಬೇಕಾದರೆ ಬೇರೆ ಆಯ್ಕೆ ಇದೆ. ಆದರೆ ಕಾಂಗ್ರೆಸ್​ಗೆ ಕುಮಾರಸ್ವಾಮಿಯವರೇ ಅನಿವಾರ್ಯ ಎಂದು ಹೇಳಿ ಸ್ವಪಕ್ಷೀಯರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕುಮಾರಸ್ವಾಮಿಗೆ ಕಾಂಗ್ರೆಸ್​ ಅನಿವಾರ್ಯವಲ್ಲ ಎಂದು ಎಚ್​ಡಿಕೆ ಪರ ಬ್ಯಾಟಿಂಗ್ ಮಾಡಿದರು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಅಂಬರೀಶ್​​​ ಕಾಂಗ್ರೆಸ್​ ಪಕ್ಷದಿಂದ ಹೊರಬಂದು ಜೆಡಿಎಸ್​ ಸೇರುತ್ತಾರ ಎಂಬ ಅನುಮಾನಗಳು ಕಾಣಿಸಿಕೊಂಡಿವೆ.

Edited By

Manjula M

Reported By

Manjula M

Comments