ಬಿಗ್ ಬ್ರೇಕಿಂಗ್: ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಇವರೆ..!?

24 Aug 2018 10:28 AM | Politics
13958 Report

ಕಳೆದ ವಿಧಾನಸಭೆಯಲ್ಲಿ ಮಂಡ್ಯದ ಸಂಸದರಾಗಿದ್ದ ಪುಟ್ಟರಾಜು ಅವರು ಸ್ಪರ್ಧಿಸಿ ಗೆದ್ದಿದ್ದಾರೆ. ಈಗ ಅವರ ರಾಜೀನಾಮೆಯಿಂದ ತೆರವಾದ ಮಂಡ್ಯ ಸಂಸದ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಸ್ವತಹ ಜೆಡಿಎಸ್​ ಕಾರ್ಯಕರ್ತರಲ್ಲಿಯೇ ಗೊಂದಲವನ್ನು ಉಂಟುಮಾಡಿದೆ.


ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ 7 ಸ್ಥಾನಗಳನ್ನು ಗಳಿಸಿರು ಜೆಡಿಎಸ್​ ಯಾವುದೇ ಕಾರಣಕ್ಕೂ ಕಾಂಗ್ರೆಸ್​ಗೆ ಬಿಟ್ಟುಕೊಡುವುದಿಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಅಭ್ಯರ್ಥಿ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಕಳೆದ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್​ಗೆ ಸಪೋರ್ಟ್​ ಮಾಡಿದ ಅಂಬರೀಶ್​ ಅವರು ಚುನಾವಣೆ ವೇಳೆಗೆ ಜೆಡಿಎಸ್​ ಸೇರಲಿದ್ದು ಅವರೇ ಜೆಡಿಎಸ್​ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಅಂಬರೀಶ್​ ಈ ಬಗ್ಗೆ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಆದರೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅಂಬರೀಶ್​ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಕ್ಕೆ ಸಿದ್ದರಾಗಿದ್ದಾರೆ. ಅವರನ್ನು ಪಕ್ಷಕ್ಕೆ ತರುವ ಕೆಲಸವನ್ನು ಅವರ ಸ್ನೇಹಿತರಾಗಿರುವ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಬೇಕು ಎಂದು ಬಹಿರಂಗವಾಗಿ ಕೇಳಿದರೂ ತಮ್ಮ ಹಿರಿ ಮಗನ ಪುತ್ರ ಪ್ರಜ್ವಲ್​ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಟಿಕೆಟ್​ ನೀಡಿರಲಿಲ್ಲ. ಪ್ರಜ್ವಲ್​ಗೆ ಹಾಸನದಿಂದ ಲೋಕಸಭೆಗೆ ಟಿಕೆಟ್​ ನೀಡುವುದಾಗಿ ದೇವೇಗೌಡರೇ ಹೇಳಿದ್ದರು.ಜೆಡಿಎಸ್​ಗೆ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿರುವ ಮಂಡ್ಯದಿಂದ ಪ್ರಜ್ವಲ್​ರನ್ನೇ ಕಣಕ್ಕಿಳಿಸುತ್ತಾರ ದೇವೇಗೌಡರು ಎನ್ನುವ ಮಾತುಗಳು ಕೇಳಿಬರುತ್ತಿದ್ದು. ಒಂದೊಮ್ಮೆ ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟರೆ… ದೇವೇಗೌಡರೇ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದು ಮಾಹಿತಿಯ ಪ್ರಕಾರ ಸಿಎಸ್​ ಪುಟ್ಟರಾಜು ಅವರೇ ಮತ್ತೆ ಮಂಡ್ಯದ ಜೆಡಿಎಸ್​ ಪಕ್ಷದ ಅಭ್ಯರ್ಥಿ ಆಗಲಿದ್ದಾರ ಎನ್ನುವ ಅನುಮಾನ ಕಾಡುವುದಕ್ಕೂ ಪ್ರಾರಂಭವಾಗಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಬಲ ಖಾತೆ ಸಿಗದ ಕಾರಣ ಅವರು ರಾಷ್ಟ್ರ ರಾಜಕಾರಣಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ

Edited By

Manjula M

Reported By

Manjula M

Comments