ಬಿಗ್ ಬ್ರೇಕಿಂಗ್ : ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾಜಿ ಸಿಎಂ ಸಿದ್ದುಗೆ ಕೊಕ್..! ಹಾಗಾದ್ರೆ ಸಿಎಂ ಎಚ್’ಡಿಕೆ ಮಾಸ್ಟರ್ ಪ್ಲಾನ್ ಏನು..!?

23 Aug 2018 9:43 AM | Politics
5436 Report

ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೆ ಸಾಕಷ್ಟು ಊಹಾಪೋಹಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದೆಇದೆ. ಸಾಕಷ್ಟು ಒಳಜಗಳಗಳು ನಡೆಯುತ್ತಿವೆ ಎಂಬುದು ಕೂಡ ತಿಳಿದೆ ಇದೆ. ಇದೀಗ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಮನ್ವಯ ಸಮಿತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರಹಾಕಲು ಮಾಸ್ಟರ್ ಫ್ಲಾನ್ ಅನ್ನು ಸಿದ್ದ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.  

ಸಿಎಂ ಕುಮಾಸ್ವಾಮಿಯವರು ಸಮನ್ವಯ ಸಮಿತಿ ಪುನಾರಚನೆಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸಮನ್ವಯ ಸಮಿತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರಹಾಕಲು ದೊಡ್ಡಮಟ್ಟದಲ್ಲಿ ಪ್ಲಾನ್ ವೊಂದು ಸಿದ್ದವಾಗಿದೆ ಎನ್ನಲಾಗಿದೆ.. ಸಿದ್ದರಾಮಯ್ಯ ಅವರು ಯೂರೋಪ್​ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಪುನಾರಚನೆಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments